Advertisement

ಯಾದವ ಸಮಾಜ ಅಭಿವೃದ್ಧಿ ಆಗಲಿ: ಶಾಸಕ

11:03 AM Aug 12, 2020 | Suhan S |

ಮಾಲೂರು: ತಾಲೂಕಿನಲ್ಲಿ ಯಾದವರ ಸಂಖ್ಯೆ ಕಡಿಮೆ ಇದ್ದು, ಶ್ರಮಜೀವಿಗಳು, ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡುವುದಾಗಿ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿ, ಸಮಾಜದಲ್ಲಿ ಶ್ರೀಕೃಷ್ಣನ ಆದರ್ಶ, ವ್ಯಕ್ತಿತ್ವ, ತಂತ್ರಗಾರಿಕೆ, ಸಮಾಜಕ್ಕೆ ದಾರಿ ದೀಪವಾಗಿದೆ. ಭಗವದ್ಗೀತೆಯಲ್ಲಿನ ಸಂದೇಶ, ಕೃಷ್ಣನ ಆದರ್ಶ ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಯಾದವರ ರಾಜಕೀಯ ಹಾಗೂ ಶೈಕ್ಷಣಿಕ ಪ್ರಗತಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದ್ದು, ಪುರಸಭೆಯ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ನಿವೇಶನ ಮಂಜೂರು ಮಾಡಲಾಗುವುದು ಎಂದರು.

ಯಾದವ ಸಂಘದ ತಾಲೂಕು ಅಧ್ಯಕ್ಷ ಆಲ ಗೊಂಡಹಳ್ಳಿ ಗೋವಿಂದಪ್ಪ ಮಾತನಾಡಿ ದರು. ತಹಶೀಲ್ದಾರ್‌ ಮಂಜುನಾಥ್‌, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭಾ ಮಾಜಿ ಉಪಾಧ್ಯಕ್ಷ ವೆಂಕಟಸ್ವಾಮಿ, ತಾಲೂಕು ಯಾದವ ಸಂಘದ ಕಾರ್ಯದರ್ಶಿ ನಟರಾಜ್‌, ಖಜಾಂಚಿ ರವಿಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸಂಜೀವಯ್ಯ, ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಬಾಬು, ಮುಖಂಡರಾದ ಗೋಪಾ ಲಪ್ಪ, ಚಂದ್ರಶೇಖರ್‌, ಬಿ.ಕೃಷ್ಣಪ್ಪ, ದೊಡ್ಡವೀರಯ್ಯ, ಜಯರಾಮ್‌, ಚನ್ನರಾಯಪ್ಪ, ನವೀನ್‌, ಮಂಜು ನಾಥ್‌, ಕೃಷ್ಣಪ್ಪ, ಚಿಕ್ಕವೆಂಕಟೇಶ್‌, ನಾರಾ ಯಣ ಸ್ವಾಮಿ, ಕೋಳಿನಾರಾಯಣ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next