Advertisement

ದೇವೇಗೌಡರು ಕಣ್ಣೀರು ಕಹಾನಿ ಬಿಡಲಿ: ಈಶ್ವರಪ್ಪ

10:52 PM Apr 09, 2019 | Team Udayavani |

ಬಾಗಲಕೋಟೆ: “ದೇವೇಗೌಡರ ಕುಟುಂಬದವರು ಪ್ರತಿ ಬಾರಿ ಕಣ್ಣೀರು ಕಹಾನಿ ಸೃಷ್ಟಿ ಮಾಡುತ್ತಾರೆ. ಇದು ಏಕೆ ಎಂಬುದು ಹೇಳಲಿ. ದೇಶದ ಸೈನಿಕರ ಸಾವು ಸಂಭವಿಸಿದಾಗ, ರೈತ ಆತ್ಮಹತ್ಯೆ ಮಾಡಿಕೊಂಡಾಗ ಕಣ್ಣೀರು ಹಾಕಲಿಲ್ಲ. ಐಟಿ ದಾಳಿ ಆಯಿತು ಎಂದು ಕಣ್ಣೀರು ಹಾಕ್ತಿದ್ದಾರೆಯೇ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, “ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್‌ ಕಣ್ಣೀರು ಹಾಕುತ್ತಾರೆ. ಪುಲ್ವಾಮಾದಲ್ಲಿ ಸೈನಿಕರ ಹತ್ಯೆಯಾದಾಗ ಕಣ್ಣೀರು ಹಾಕಲಿಲ್ಲ. ಬರದಿಂದ ಕಂಗಾಲಾಗಿ ರೈತ ಆತ್ಮಹತ್ಯೆ ಮಾಡಿಕೊಂಡಾಗಲೂ ಕಣ್ಣೀರು ಬರಲಿಲ್ಲ.

ಐಟಿ ದಾಳಿಯಲ್ಲಿ ಸಿಕ್ಕಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಯಾವ ವಿಷಯಕ್ಕೆ ಕಣ್ಣೀರು ಹಾಕುತ್ತಿದ್ದಾರೆ ಎಂಬುದು ದೇವೇಗೌಡರ ಕುಟುಂಬದವರೇ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು. ನಮ್ಮದು ಕುಟುಂಬ ರಾಜಕಾರಣ ಅಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ.

ಹಾಗಾದರೆ, ಕುಟುಂಬ ರಾಜಕಾರಣ ಅಂದ್ರೆ ಏನೆಂದು ಅವರೇ ಹೇಳಲಿ. ದೇವೇಗೌಡರು, ಇಬ್ಬರು ಮೊಮ್ಮಕ್ಕಳು ಚುನಾವಣೆಗೆ ನಿಂತಿದ್ದಾರೆ. ಒಬ್ಬ ಪುತ್ರ ಸಿಎಂ ಆಗಿದ್ದಾರೆ. ಮತ್ತೂಬ್ಬ ಪುತ್ರ ಸಚಿವರಿದ್ದಾರೆ. ಸೊಸೆ ಶಾಸಕಿಯಾಗಿದ್ದಾರೆ. ತಮ್ಮ ಕುಟುಂಬದ ಇನ್ನೂ ಎಷ್ಟು ಜನರನ್ನು, ಏನು ಮಾಡಬೇಕೆಂದಿದ್ದಾರೋ ಗೊತ್ತಿಲ್ಲ. ಇದು ಕುಟುಂಬ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next