Advertisement

ದೇವೇಗೌಡ, ಸಿದ್ದು ಸ್ವಯಂ ಘೋಷಿತ ವ್ಯಕ್ತಿಗಳು

06:00 AM Oct 27, 2018 | |

ಬಳ್ಳಾರಿ: ರಾಜ್ಯದಲ್ಲಿ ಇಬ್ಬರು ಸ್ವಯಂ ಘೋಷಿತ ವ್ಯಕ್ತಿಗಳಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸ್ವಯಂ ಘೋಷಿತ ಮಣ್ಣಿನ ಮಗನಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಸ್ವಯಂ ಘೋಷಿತ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದ ಸಿದ್ದರಾಮಯ್ಯ, ಈಗಲೂ ನಾನೇ ಸಿಎಂ, ಮುಂದೆಯೂ ನಮ್ಮ ಸರ್ಕಾರ
ಬರಲಿದ್ದು, ಆಗಲೂ ನಾನೇ ಸಿಎಂ, ಮುಂದಿನ ವರ್ಷವೂ ನಾನೇ ದಸರಾ ಉತ್ಸವ ಉದ್ಘಾಟಿಸುವುದಾಗಿ ತಿಳಿಸುವ ಮೂಲಕ ಜನಾದೇಶವಿಲ್ಲದೇ ಸ್ವಯಂ ಘೋಷಿತ ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಹ ಯಾವಾಗಲೂ ಈ ನಾಡಿನ ಮಣ್ಣಿನ ಮಗ ಎಂದು ಹೇಳಿಕೊಂಡು ಸ್ವಯಂ ಘೋಷಿತ ಮಣ್ಣಿನ ಮಗನಾಗಿದ್ದಾರೆ. ಸಿದ್ದರಾಮಯ್ಯಗೆ ಚಾಮುಂಡಿ ಕ್ಷೇತ್ರದಲ್ಲಿ ಸೋತ ಮೇಲೂ ಬುದ್ಧಿ ಬರಲಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next