Advertisement

ದೇವರಾಜ್‌ ಬಿಝಿಯಾಗಿದ್ದಾರೆ!

06:13 PM Sep 15, 2017 | |

“ನೀವು ಕರೆ ಮಾಡಿರುವ ಚಂದಾದಾರು ಬಿಝಿಯಾಗಿದ್ದಾರೆ’ ಎಂಬ ಚಿತ್ರದ ಬಗ್ಗೆ ಓದಿದ ನೆನಪಿರಬೇಕು. ಅದೇ “ತಿಥಿ’ ಖ್ಯಾತಿಯ ಪೂಜಾ ನಟಿಸುತ್ತಿರುವ ಹೊಸ ಚಿತ್ರ ಅದು. ಈ ಚಿತ್ರವನ್ನು “ದೂಧ್‌ ಸಾಗರ್‌’ ನಿರ್ದೇಶಿಸಿದ್ದ ಸ್ಯಾಮ್ಯುಯಲ್‌ ನಿರ್ದೇಶಿಸುತ್ತಿದ್ದಾರೆ. ಈಗ ಈ ಚಿತ್ರದಲ್ಲಿ ಇನ್ನಷ್ಟು ಬೆಳವಣಿಗೆಗಳಾಗಿದ್ದು, ಮುಂದಿನ ತಿಂಗಳ 10ರಂದು ಚಿತ್ರ ಪ್ರಾರಂಭವಾಗಲಿದೆ.

Advertisement

ಪ್ರಮುಖವಾಗಿ ಈ ಚಿತ್ರಕ್ಕೆ ದೇವರಾಜ್‌, ಶೃತಿ, ತಾರಾರಂತಹ ಹಿರಿಯರ ಆಗಮನವಾಗಿದೆ. ಈ ಮೂವರೂ ಚಿತ್ರದ ಕಥೆ ಕೇಳಿ ಒಪ್ಪಿಕೊಂಡು, ಚಿತ್ರದ ಭಾಗವಾಗುವುದಕ್ಕೆ ಸಮ್ಮತಿ ನೀಡಿದ್ದಾರೆ. ಇನ್ನು ಇವರೆಲ್ಲರ ಜೊತೆಗೆ ಶೀತಲ್‌ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮನೋಜ್‌ ಜಾರ್ಜ್‌ ಅವರ ಸಂಗೀತ, ಸುಬ್ಬಯ್ಯ ಕುಟ್ಟಪ್ಪ ಅವರ ಛಾಯಾಗ್ರಹಣವಿದೆ.

ಈ ಚಿತ್ರದಲ್ಲಿ ದೇವರಾಜ್‌ ಅವರದ್ದು ವಿಭಿನ್ನವಾದ ಪಾತ್ರವಾಗಿದ್ದು, ಹಿಂದೆಂದು ನೋಡಿರದ ಗೆಟ್ಟಪ್ಪಿನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ. ಅದಕ್ಕೆ ಸರಿಯಾಗಿ, ಅವರು ಈಗಾಗಲೇ ತಯಾರಿ ಶುರು ಮಾಡಿದ್ದಾರೆ. ಮನುಷ್ಯ ಸಂಬಂಧಗಳು ಸಡಿಲವಾದರೆ ಅದನ್ನು ಮತ್ತೆ ಸರಿಯಾಗಿಸೋದು ಎಷ್ಟು ಕಷ್ಟ ಎಂದು ಹೇಳುವ ಈ ಚಿತ್ರಕ್ಕೆ ಬೆಂಗಳೂರು, ಗೋವಾ, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಮಧುಸೂಧನ್‌, ತಮ್ಮ ಗೆಳೆಯರೊಂದಿಗೆ ಸೇರಿ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next