Advertisement

ಮಕ್ಕಳಿಗೆ ಹಾಲು-ಬಿಸ್ಕಿತ್‌ ವಿತರಣೆ

06:44 PM May 25, 2020 | Naveen |

ದೇವರಹಿಪ್ಪರಗಿ: ಕೋವಿಡ್ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ನೆರವಾಗುವ ಅವಕಾಶ ನನಗೆ ದೇವರು ಕಲ್ಪಿಸಿಕೊಟ್ಟಿದ್ದಾನೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ದೇವರಹಿಪ್ಪರಗಿ ಸೇರಿದಂತೆ ಮತಕ್ಷೇತ್ರದ ಪಡಗಾನೂರ, ಮುಳಸಾವಳಗಿ, ಹಿಟ್ಟನಹಳ್ಳಿ, ಇಂಗಳಗಿ, ಕಡ್ಲೇವಾಡ, ಹರನಾಳ, ದೇವೂರ, ಮಣೂರ, ಜಾಲವಾದ, ಹರನಾಳ ಸೇರಿದಂತೆ ಮತಕ್ಷೇತ್ರದ ಹಲವಾರು ಕ್ವಾರಂಟೈನ್‌ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳಿಗೆ ಹಾಲು, ಬಿಸ್ಕಿತ್‌, ಚಾಕಲೆಟ್‌, ಬ್ರೇಡ್‌ಗಳು ವಿತರಿಸಿ ಮಾತನಾಡಿದರು. ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಎರಡು ಕ್ಷೇತ್ರಗಳು ನನ್ನ ಎರಡು ಕಣ್ಣುಗಳು ಇದ್ದಂತೆ. ಎರಡು ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ಸ್ಪಂದಿಸುವುದು ಧರ್ಮವಾಗಿದೆ ಎಂದರು. ಪಪಂ ಸದಸ್ಯ ಗುರುರಾಜ ಗಡೇದ, ಕಾಶೀನಾಥ ಕೋರಿ, ಪ್ರವೀಣ ಹುಗ್ಗಿ, ಗಂಗಪ್ಪ ಬಬಲೇಶ್ವರ, ಸೈಪನ್‌ ಮುಲ್ಲಾ, ಪ್ರಕಾಶ ಮಲ್ಹಾರಿ, ಮಾಂತೇಶ ದೊಡ್ಡಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next