Advertisement

ಶ್ರೀಮೌಕ್ತಿಕಾಂಬ ದೇವಿ ಕರಗ: 850 ಕೆ.ಜಿ. ಹೂವಿನಲ್ಲಿ ರಸ್ತೆ ಮೇಲೆ ಚಕ್ರದ ಅಲಂಕಾರ

02:34 PM May 18, 2022 | Team Udayavani |

ದೇವನಹಳ್ಳಿ: ಶ್ರೀಮೌಕ್ತಿಕಾಂಬ ದೇವಿ ಕರಗ ಮಹೋತ್ಸವದ ಪ್ರಯುಕ್ತ ಪಟ್ಟಣದ ಪರ್ವತಪುರ ರಸ್ತೆಯಲ್ಲಿನ ಮರಳುಬಾಗಿಲಿನಲ್ಲಿ 850 ಕೆ.ಜಿ.ಹೂವಿನಲ್ಲಿ ಕರಗಕ್ಕೆ ವಿಶೇಷ ರೀತಿಯ ಚಕ್ರದವಿನ್ಯಾಸ ಮಾಡಲಾಗಿತ್ತು. ಕರಗ ನೋಡಲು ಬಂದ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ಹೊತ್ತು ಮೆರವಣೆಗೆ ನಡೆಸಿದ ಪೂಜಾರಿ ರವಿಕುಮಾರ್‌ಸುಮಾರು 4 ನಿಮಿಷಗಳ ಕಾಲ ಹೂವಿನ ಮೇಲೆ ನೃತ್ಯ ಮಾಡಿದರು. ಈ ವೇಳೆ ಸಹಸ್ರಾರು ಭಕ್ತರು ಚಪ್ಪಾಳೆ ತಟ್ಟಿ ಈ ಧಾರ್ಮಿಕ ವೈಭವ ಕಣ್ತುಂಬಿಕೊಂಡರು.

Advertisement

1.5 ಟನ್‌ನ ಎಲ್ಲಾ ತರಹದ ಹೂವುಗಳನ್ನು ಅಲಂಕಾರದ ರೀತಿಯಲ್ಲಿ ರಸ್ತೆಯಲ್ಲಿ ಮಾಡಲಾಗಿತ್ತು. ಮಲ್ಲಿಗೆ 250 ಕೆ.ಜಿ., ಚೆಂಡುಹೂವು 250 ಕೆ.ಜಿ., ಕನಕಾಂಬರ 150 ಕೆ.ಜಿ.,ಬಟನ್ಸ್‌ ರೋಜ್‌ 250 ಕೆ.ಜಿ., ಕೆಂದೇರಿ ಹೂವು100 ಕೆ.ಜಿ ಹಾಗೂ ಇತರೆ ಹೂಗಳನ್ನು ಹಾಕುವುದರಮೂಲಕ ವಿಜೃಂಭಣೆಯಿಂದ ಮಾಡಲಾಗಿತ್ತು.ಎರಡೂವರೆ ಲಕ್ಷ ರೂ.ಗೂ ಅಧಿಕ ಮೌಲ್ಯದ ಬಿಡಿಹೂವುಗಳಿಂದ ರಸ್ತೆಯಲ್ಲಿ ಹಾಕಿ, ರಂಗೋಲಿ ಚಿತ್ರದಆಕೃತಿಯ ಮೂಲಕ ಹೂಗಳನ್ನು ಹಾಸಿ ಕರಗವನ್ನುವಿಶೇಷವಾಗಿ ಸ್ವಾಗತಿಸಿದರು. ಇದಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ವಿ.ನಾರಾಯಣ್‌ ಮತ್ತು ಸ್ನೇಹಿತರು, ವೆಂಕಟರಾಯಪ್ಪ ಕುಟುಂಬದವರು ಸಹಕರಿಸಿದರು.

ಉತ್ತಮ ಮಳೆ, ಸಮೃದ್ಧ ಜೀವನಕ್ಕೆ ಪ್ರಾರ್ಥನೆ:ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಗೋಪಾಲ್‌ ಮಾತನಾಡಿ, ಸತತ 7ನೇ ವರ್ಷದಿಂದಕರಗ ಪ್ರಯುಕ್ತ ಹೂವಿನ ಅಲಂಕಾರವನ್ನು ಮಾಡಿ,ಕರಗ ನಡೆದಾಡುವಂತೆ ಮಾಡಲಾಗುತ್ತಿದೆ. ಮೌಕ್ತಿಕಾಂಭ ಅಮ್ಮನವರು ಕೊರೊನಾವನ್ನು ಈಪ್ರಪಂಚದಿಂದಲೇ ಮುಕ್ತಿಗೊಳಿಸಿ, ಎಂದಿನಂತೆಧಾರ್ಮಿಕ ಕಾರ್ಯಗಳು ನಡೆಯುವಂತೆ ಆಗಲಿ.ಕೊರೊನಾ ಇದ್ದಿದ್ದರಿಂದ ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ. ಈ ವರ್ಷ ಕೊರೊನಾಇಳಿಮುಖವಾಗಿರುವುದರಿಂದ ಅದ್ಧೂರಿಯಾಗಿಕರಗ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ರೈತರಿಗೆಕಾಲಕಾಲಕ್ಕೆ ಉತ್ತಮ ಮಳೆ, ಸಮೃದ್ಧ ಜೀವನಸಾಗಿಸುವಂತೆ ಆಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

ಪ್ರಮುಖರಾದ ವಿ.ಶ್ರೀನಿವಾಸ್‌, ವಿ.ನಾರಾಯಣಸ್ವಾಮಿ, ವಿ.ಗೋಪಾಲ್‌, ವಾಸು, ಮಂಜುನಾಥ್‌ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next