Advertisement

ನಾಲ್ಕು ಕಡೆ ವಾರದ ಸಂತೆ ನಡೆಸಲು ತೀರ್ಮಾನ

01:27 PM Apr 23, 2020 | Naveen |

ದೇವದುರ್ಗ: ಸಿರವಾರ ಕ್ರಾಸ್‌ ಹತ್ತಿರ ನಡೆಯುತ್ತಿದ್ದ ವಾರದ ಸಂತೆ ರದ್ದುಗೊಳಿಸಿ ಕಲ್ಯಾಣಪ್ಪ ತೋಟದ ಪಕ್ಕದಲ್ಲಿ, ಬಸ್‌ ನಿಲ್ದಾಣ, ಕೃಷಿ ಮಾರುಕಟ್ಟೆ, ಸಾರ್ವಜನಿಕ ಕ್ಲಬ್‌ ಆವರಣ ಸೇರಿ ನಾಲ್ಕು ಕಡೆ ನಡೆಸಲು ತೀರ್ಮಾನಿಸಲಾಯಿತು.

Advertisement

ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಮಧುರಾಜ ಯಾಳಗಿ ಮಾತನಾಡಿ, ಪಟ್ಟಣದಲ್ಲಿ ಶನಿವಾರ ನಡೆಯುವ ವಾರದ ಸಂತೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂತೆ ಸ್ಥಳದಲ್ಲಿ ಒಬ್ಬರಂತೆ ಕೊಳಿತುಕೊಂಡು ವ್ಯಾಪಾರ ಮಾಡಲು ಸುಣ್ಣ ಹಾಕಿ ಗುರುತು ಮಾಡಬೇಕು. ಸಂತೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಯಾವುದೇ ತೊಂದರೆ ಆಗದಂತೆ ಕಂದಾಯ, ಪುರಸಭೆ, ಕೃಷಿ ಮಾರುಕಟ್ಟೆ, ಪೊಲೀಸ್‌ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವಂತೆ ಸೂಚನೆ ನೀಡಿದರು.

ಸಂತೆ ವ್ಯಾಪಾರಕ್ಕೆ ತರಕಾರಿ ತೆಗೆದುಕೊಂಡು ಬರುವಂತ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಬೇಕು. ಯಾವುದೇ ಕಾರಣಕ್ಕೂ ಸಂಚಾರ ಸಮಸ್ಯೆಯಾಗದಂತೆ ನಿಗಾವಹಿಸಬೇಕು. ಕೃಷಿ ಮಾರುಕಟ್ಟೆ ಆವರಣದಲ್ಲಿ ನಡೆಯುವ ಸಂತೆಗೆ ಬೇಕಾದ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ ಎಂದು ಕೃಷಿ ಮಾರುಕಟ್ಟೆ ಅಧಿಕಾರಿ ರಂಗನಾಥ ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಸಿಪಿಐ ಆರ್‌.ಎಂ. ನದಾಫ್‌, ಪಿಎಸ್‌ಐ ಎಲ್‌.ಬಿ. ಅಗ್ನಿ, ಶಿರಸ್ತೇದಾರ ಶ್ರೀನಿವಾಸ ಚಾಪಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next