Advertisement

ದೇವಾಡಿಗ  ವಾಟ್ಸಾಪ್‌ ಬಳಗ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು

12:47 PM Oct 31, 2018 | Team Udayavani |

ಮುಂಬಯಿ: ಸಾಮಾ ಜಿಕ ಕಳಕಳಿಯನ್ನೇ ಮೂಲ ಉದ್ದೇಶ ವಾಗಿಟ್ಟುಕೊಂಡು ಮುನ್ನಡೆಯು ತ್ತಿರುವ ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್‌ ಬಳಗವು ವಿವಿಧೆಡೆಗಳಲ್ಲಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿತು.

Advertisement

ಸೊಂಟದ ಕೆಳಗೆ ಬಲ ಕಳಕೊಂಡಿ ರುವ ಬಾಲಕ ತನುಷ್‌ ದೇವಾಡಿಗ  ಮತ್ತು ಬಿಜೂರಿನ ಕಾಲಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬದ ಕೃಷಿ¡ ದೇವಾಡಿಗರಿಗೆ ಅ. 7 ರಂದು ಅವರ ಮನೆಗೆ ತೆರಳಿ ತಲಾ  15,000 ರೂ. ವೈದ್ಯಕೀಯ ನೆರವು ವಿತರಿಸಿತು.

ಮುಂಬಯಿ ಘಾಟ್‌ಕೋಪರ್‌ ಪಶ್ಚಿಮದ ಅಮೃತ್‌ ನಗರದ ನಿವಾಸಿ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ  ಜೀತೇಶ್‌ ದೇವಾಡಿಗರ ಮನೆಗೆ ತೆರಳಿ 15 ಸಾವಿರ ರೂ. ಗಳನ್ನು ಅವರ ಹೆತ್ತವರಿಗೆ ನೀಡಿತು. ಈ ಸಂದರ್ಭದಲ್ಲಿ ರಾಮ ದೇವಾಡಿಗ, ಮಹಾಲಿಂಗ ದೇವಾಡಿಗ, ಪರಮೇಶ್ವರ ದೇವಾಡಿಗ, ಜಗದೀಶ ದೇವಾಡಿಗ,  ಪುರುಷೋತ್ತಮದಾಸ ದೇವಾಡಿಗ, ಸತೀಶ ದೇವಾಡಿಗ, ರಾಜ ದೇವಾಡಿಗ,   ಮಧುಕರ ದೇವಾಡಿಗ, ಶ್ರೀಧರ ದೇವಾಡಿಗ, ಅಶೋಕ್‌ ದೇವಾಡಿಗ,  ಸುಂದರ ಮೊಲಿ, ಸದಾಶಿವ ಮೊಲಿ, ದಯಾನಂದ ದೇವಾಡಿಗ,  ಸುರೇಶ ದೇವಾಡಿಗ ತೋಕೂರು, ಸುರೇಶ ದೇವಾಡಿಗ ಬಾಕೂìರು, ಮಂಜು ದೇವಾಡಿಗ,   ಪ್ರಭಾವತಿ ದೇವಾಡಿಗ,  ಉಮಾವತಿ ದೇವಾಡಿಗ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next