Advertisement

ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳ ಪತ್ತೆ : ಆರೋಪಿ ಬಂಧನ

04:55 PM Apr 04, 2021 | Team Udayavani |

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕಲ್ಲು ಗಣಿಗಾರಿಕೆ ಸಲುವಾಗಿ ಅಕ್ರಮವಾಗಿ ಸಂಗ್ರಹಿಸಿದ್ದ

Advertisement

ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ತಾಲೂಕಿನ ಹಿರಿಕಾಟಿ ಗ್ರಾಮದ ಮಹೇಶ್(42) ಎಂಬ ಆರೋಪಿಯನ್ನು ಬಂಧಿಸಲಾಗಿದೆ.

ಮನೆ ಸಮೀಪ ಸೌದೆಗಳ ನಡುವೆ ಮುಚ್ಚಿಟ್ಟಿದ್ದ ಹತ್ತು ಕೇಸ್ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 120 ಟ್ಯೂಬ್, 80 ಜಿಲೆಟಿನ್ ಕಡ್ಡಿಗಳು, 3 ಬಂಡಲ್ ಬತ್ತಿ, ಉಪ್ಪುನ್ನು ವಶಕ್ಕೆ ಪದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next