Advertisement

ನನ್ನ ಸಂಪತ್ತು ಪತ್ತೆ ಹಚ್ಚಿ ಜೈಲಿಗೆ ಹಾಕಿ

06:30 AM May 05, 2018 | Team Udayavani |

ಕಲಬುರಗಿ: ಜಿಲ್ಲೆಯ ಕಾಳಗಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, “ಮೋದಿ ಅವರೇ ನೀವು ಪ್ರಧಾನಿ ಇದ್ದೀರಿ. ನನ್ನ ಸಂಪತ್ತು ಎಷ್ಟಿದೆ ಎನ್ನುವುದನ್ನು ಪತ್ತೆ ಹಚ್ಚಿ. ಜೈಲಿಗೆ ಹಾಕ್ತಿರಾ ಹಾಕಿ. ಹೋಗಲು ನಾನು ಸಿದ್ಧನಿದ್ದೇನೆ. ಗುರುವಾರ ಒಂದೆಡೆ ಮೋದಿ ಅವರು ಮಾತನಾಡುತ್ತಿದ್ದರೆ ಇನ್ನೊಂದೆಡೆ ಇಬ್ಬರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ ನಡೆದಿದೆ.

Advertisement

ಇಂತಹ ದಾಳಿಗಳಿಗೆಲ್ಲ ನಾವು ಹೆದರೋದಿಲ್ಲ’ ಎಂದು ಕಿಡಿ ಕಾರಿದರು.ಜನರು ತಿರುಗಿ ಬಿದ್ರೆ ನೀವು ಪಾತಾಳಕ್ಕೆ ಹೋಗ್ತಿರಿ.
ಐಟಿ ದಾಳಿ ಮಾಡಿದ್ರೆ ತಪ್ಪಲ್ಲ. ಆದ್ರೆ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿದ್ದು ಸರಿಯಲ್ಲ.

ಮೋದಿ ಅವರೇ ನೆನಪಿರಲಿ, ಮುಂದೆ ಇದು ನಿಮಗೂ ತಿರುಗುಬಾಣ ಆಗುತ್ತದೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮೋದಿ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಅವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ರೆ ನನಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂದು ಮಾನ್ಯತೆ ಕೊಡಬಹುದಿತ್ತು. ಅದನ್ನು ಕಾರ್ಯರೂಪಕ್ಕೆ ತರದೇ ಬರೀ ಅನುಕಂಪ ವ್ಯಕ್ತಪಡಿಸಿದ್ದನ್ನು ನೋಡಿದರೆ ಮೋದಿ ಒಬ್ಬ ಸುಳ್ಳಿನ ಸರದಾರ ಎನ್ನುವುದನ್ನು ಸಾಬೀತು ಪಡಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next