Advertisement

ಸಣ್ಣ ಜಮೀನಿಗೆ ಕುಟುಂಬವೇ ನಾಶ

01:02 AM Jun 24, 2019 | Sriram |

ಭೋಪಾಲ: ದೊಡ್ಡ ಮಟ್ಟದ ಆಸ್ತಿಗಾಗಿ ಸಹೋದರರು ಖಟ್ಲೆ ಹೂಡುವುದು, ಹೊಡೆದಾಡುವುದು ಗೊತ್ತು. ಆದರೆ 10×10 ಅಡಿ ಜಮೀನಿಗಾಗಿ ವಾಗ್ವಾದ ಬೆಳೆದು, ಗುಂಡು ಹಾರಿಸಿಕೊಂಡು ಮಗು ಸೇರಿ ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ. ಮಧ್ಯಪ್ರದೇಶ ರಾಜಧಾನಿ ಭೋಪಾಲದ ಛೋಟಿ ಬಜಾರಿಯಾ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂದೂ ಕನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಗ್ವಾದ ಶುರುವಾಗುತ್ತಲೇ ಬಂದೂಕಿಗೆ ಗುಂಡು ತುಂಬಿ ಇರಿಸಿ ಸಿದ್ಧಪಡಿಸಿಟ್ಟು ಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಣ್ಣ ಅಳತೆಯ ಜಮೀನಿಗಾಗಿ ಕುಟುಂಬವೇ ನಾಶವಾಗಿದ್ದು, ಕೇವಲ ನಾಲ್ಕು ವರ್ಷದ ಬಾಲಕಿ ಮಾತ್ರ ಜೀವಂತವಾಗಿದ್ದಾಳೆ. ಮನೆ ನಿರ್ಮಿಸುವ ವಿಚಾರಕ್ಕೆ ಜಗಳ ಶುರುವಾಯಿತು. ಜಮೀನು ವಿಭಜನೆ ಮಾಡಬೇಕು ಎಂದಾಗ, ಪರಿಸ್ಥಿತಿ ವಿಕೋಪಕ್ಕೆ ತೆರಳಿತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next