Advertisement

ರಾಜೀವ್‌ರನ್ನು ಟೀಕಿಸಿದ್ರೂ ಇ.ಡಿ. ದಾಳಿ ಆಗಿಲ್ಲ: ಉದ್ಧವ್‌

11:15 PM Aug 20, 2024 | Team Udayavani |

ಮುಂಬೈ: ಕಾಂಗ್ರೆಸ್‌ ಮತ್ತು ಶಿವಸೇನೆ­ ನಡುವೆ ವಿರೋಧವಿದ್ದರೂ, ಪ್ರತೀಕಾರ ಇರಲಿಲ್ಲ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯನ್ನು ವಿರೋಧಿಸಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆ ದಾಳಿ ಮಾಡು ತ್ತಿರಲಿಲ್ಲ ಎಂದು ಶಿವ ಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಂಗಳವಾರ ಹೇಳಿದ್ದಾರೆ.

Advertisement

ರಾಜೀವ್‌ ಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಸೇನೆ ಸ್ಥಾಪಕರಾದ ಬಾಳಾ ಠಾಕ್ರೆ ಅವರು ಸಾರ್ವಜನಿಕವಾಗಿ ರಾಜೀವ್‌ ಅವರ ಬಗ್ಗೆ ಮಾತನಾ ಡುತ್ತಿದ್ದರು. ಆದರೂ ಯಾವತ್ತೂ ಕೇಂದ್ರೀಯ ತನಿಖಾ ಸಂಸ್ಥೆಗಳು ಶಿವ­ಸೇನೆ ನಾಯಕರ ಮನೆ ಬಾಗಿಲು ಬಡಿದಿದ್ದಿಲ್ಲ. ಕಾಂಗ್ರೆಸ್‌ ಮತ್ತು ಶಿವಸೇನೆ ನಡುವೆ ಪ್ರತೀಕಾರ ಇರಲಿಲ್ಲ ಎಂದಿದ್ದಾರೆ.

ಅಪ್ಪಾ, ನಿಮ್ಮ ಕನಸನ್ನು ನನಸು ಮಾಡುವೆ: ರಾಗಾ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ 80ನೇ ಜಯಂತಿ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವೀರ್‌ ಭೂಮಿಗೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ. “ನಿಮ್ಮ  ಬೋಧನೆಗಳು ನನಗೆ ಸ್ಫೂರ್ತಿ. ನಿಮ್ಮ ನೆನಪುಗಳನ್ನು ಹೊತ್ತು ನಿಮ್ಮ ಕನಸುಗಳನ್ನು ಭಾರತಕ್ಕಾಗಿ ನಾನು ನನಸು ಮಾಡುತ್ತೇನೆ’ ಎಂದು ರಾಹುಲ್‌ ಭಾವುಕವಾಗಿ ಟ್ವೀಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next