Advertisement

ಬಾಹ್ಯಾಕಾಶ ವಿಜ್ಞಾನಿ ಆಗುವ ಆಸೆ

03:03 AM May 01, 2019 | sudhir |

ಕೋಟ: ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾ ರ್ಥಿನಿ ಮಣೂರಿನ ಅನಘಾ ಉಡುಪ ಭವಿಷ್ಯದಲ್ಲಿ ಗಗನ ಯಾನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎನ್ನುವ ಆಸೆ ಹೊಂದಿದ್ದಾಳೆ. ಈಕೆ ಲೋಕಾಯುಕ್ತ ಹೆಡ್‌ ಕಾನ್‌ಸ್ಟೆಬಲ್‌ ನಾಗೇಶ್‌ ಉಡುಪ ಮತ್ತು ವಿನಯಾ ಅವರ ಪುತ್ರಿ. ಮಗಳ ಸಾಧನೆಯಿಂದ ಹೆತ್ತವರು ಖುಷಿಗೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಬೇಕು ಎನ್ನುವ ಕನಸಿತ್ತು. ಪಿಯುಸಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಆಯ್ದುಕೊಂಡು ಗಗನ ಯಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಆಸೆಹೊಂದಿದ್ದೇನೆ – ಇದು ಅನಘಾಳ ಮಾತು. ಈಕೆ ಶಿಕ್ಷಣದ ಜತೆಗೆ ಪಠ್ಯೇತರ ವಿಷಯಗಳಲ್ಲೂ ಉತ್ತಮ ಸಾಧನೆಯ ಹಿನ್ನೆಲೆ ಹೊಂದಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next