Advertisement

Desi Swara: ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಗೌರವ

01:50 PM Nov 18, 2023 | Team Udayavani |

ಲ್ಯಾಂಬೆತ್‌:ವಿದೇಶ ಪ್ರವಾಸದಲ್ಲಿದ್ದ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಹೊರಟ್ಟಿಯವರು ಲಂಡನ್‌ನಲ್ಲಿ ಸ್ಥಾಪಿಸಲಾಗಿರುವ ಬಸವೇಶ್ವರ ಪ್ರತಿಮೆಗೆ ಇತ್ತೀಚೆಗೆ ಭೇಟಿ ನೀಡಿ ಗೌರವ ಸಮರ್ಪಿಸಿದರು.

Advertisement

ಲಂಡನ್‌ನ ಲ್ಯಾಂಬೆತ್‌ ಬರೋನ ಡಾ| ನೀರಜ್‌ ಪಾಟೀಲ್‌ ಅವರು ಸ್ವಾಗತಿಸಿದರು. ಖಾದರ್‌ ಅವರು ಪ್ರತಿಮೆ ವಿಭೂತಿ ಹಚ್ಚಿ ಗೌರವ ಸಲ್ಲಿಸಿದರು.

ಲ್ಯಾಂಬೆತ್‌ನ ಬಸವೇಶ್ವರ ಫೌಂಡೇಶನ್‌ನ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬ್ರಿಟಿಷ್‌ ಭಾರತೀಯರ ಹಾಗೂ ಕನ್ನಡ ಸಂಘದ ಸದಸ್ಯರು, ಇಂಡಿಯನ್‌ ಒವರ್‌ಸೀಸ್‌ ಕಾಂಗ್ರೆಸ್‌ನ ಅಜಿತ್‌ ಮುತ್ಯಾಯಿಲ್‌ ಉಪಸ್ಥಿತರಿದ್ದರು.

ಬ್ರಿಟಿಶ್‌ ಪಾರ್ಲಿಮೆಂಟ್‌ನ ಎದುರುಗಡೆ ಕನ್ನಡದ ಹಿರಿಮೆ ಬಸವೇಶ್ವರರ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯ ಸಂಗತಿ ಎಂದು ಗಣ್ಯರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next