Advertisement

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

03:21 PM Apr 27, 2024 | Team Udayavani |

ಬಹ್ರೈನ್‌: ಬಹ್ರೈನ್‌ನಲ್ಲಿ ನೂತನವಾಗಿ ಆರಂಭಗೊಂಡ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ ( ಕೆಎನ್‌ಆರ್‌ಐ) ಯ ನಿಯೋಗ ಬಹ್ರೈನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ರಾಯಭಾರಿಗಳಾದ ವಿನೋದ್‌ ಕೆ. ಜೇಕಬ್‌ ಅವರನ್ನು ಭೇಟಿ ಮಾಡಿ ಸಂಘಟನೆಯ ವಿವಿಧ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿತು.

Advertisement

ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ರಾಜ್‌ಕುಮಾರ್‌ ಭಾಸ್ಕರ್‌, ಉಪಾಧ್ಯಕ್ಷರಾದ ವಿಜಯ ನಾಯ್ಕ, ಪ್ರಧಾನ ಕಾರ್ಯದರ್ಶಿ ರೋಶನ್‌ ಲೂಯಿಸ್‌ ಇತರ ಪದಾಧಿಕಾರಿಗಳಾದ ಜಲಾಲುದ್ದೀನ್‌ ವಿಟ್ಲ, ಮಲ್ಲಿಕಾರ್ಜುನ್‌ ಪಾಟೀಲ್‌, ರಾಘವೇಂದ್ರ ಪ್ರಸಾದ್‌, ಗಣೇಶ್‌ ಮಾಣಿಲ, ಮತ್ತು ಸಲಹೆಗಾರರಾದ ಬಹ್ರೈನ್‌ ಕ್ರಿಕೆಟ್‌ ಫೆಡರೇಶನ್‌ನ ಅಧ್ಯಕ್ಷ ಮಹಮ್ಮದ್‌ ಮನ್ಸೂರ್‌ ಹಾಗೂ ಕನ್ನಡ ಸಂಘದ ಮಾಜಿ ಅಧ್ಯಕ್ಷ ಆಸ್ಟೀನ್‌ ಸಂತೋಷ್‌ ಮತ್ತು ರಾಜೇಶ್‌ ಶೆಟ್ಟಿ ಮುಂತಾದವರಿದ್ದರು.

ವಿನೋದ್‌ ಕೆ. ಜೇಕಬ್‌ ಅವರಿಗೆ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಮುಖ್ಯವಾಗಿ ಕನ್ನಡಿಗ ಭಾರತೀಯರ ಹಿತ ರಕ್ಷಣೆಗಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯ ಯೋಜನೆಗಳ ಬಗ್ಗೆ ವಿವರ ಇತ್ತರು. ಇವರ ಮನವಿಗೆ ಸ್ಪಂದಿಸಿದ ರಾಯಭಾರಿಗಳು ತಮ್ಮ ಕಚೇರಿಯ ಮೂಲಕ ಒದಗಿಸಬಹುದಾದ ಸಹಕಾರವನ್ನು ಸಂಪೂರ್ಣವಾಗಿ ನೀಡುವುದಾಗಿ ಭರವಸೆಯಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next