Advertisement

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

04:35 PM Sep 21, 2024 | Team Udayavani |

ಯುಎಇ:”ನಮ್ಮವರು ವಿಶ್ವಕರ್ಮ ಸಮಿತಿಯ’ ಅಧಿಕೃತ ಉದ್ಘಾಟನೆ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಓಣಂ ಹಬ್ಬದ ಆಚರಣೆಯೊಂದಿಗೆ ಯುಎಐಯಲ್ಲಿ ನಡೆಯಿತು.

Advertisement

ಸಮಿತಿಯ ಅಧ್ಯಕ್ಷರಾಗಿ ಮಿಥುನ್‌ ಆಚಾರ್ಯ ಕುಂಬಳೆ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರು ವರುಣ್‌ ಆಚಾರ್ಯ ಬಜಕೂಡ್ಲು, ಉಪಾಧ್ಯಕ್ಷರು ಪ್ರಸಾದ್‌ ಆಚಾರ್ಯ ಮೂವಜೆ, ಕಾರ್ಯದರ್ಶಿ ಮಹೇಶ ಆಚಾರ್ಯ ಕಲ್ಪಾರೆ, ಖಜಾಂಚಿ ಜ್ಞಾನೇಶ್‌ ಆಚಾರ್ಯ ಮಾಯಿಪ್ಪಾಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಲಾವಣ್ಯ ಮತ್ತು ಅನುಷ್‌ ಆಚಾರ್ಯ, ಸಿಂಧೂರ ಮಿಥುನ್‌ ಆಚಾರ್ಯ, ದಿವ್ಯಾ ಜ್ಞಾನೇಶ್‌ ಆಚಾರ್ಯ, ಪಾವನ ವರುಣ್‌ ಆಚಾರ್ಯ, ಈಶಾನಿ, ಚೈತ್ರ ಕಿಶೋರ್‌ ಆಚಾರ್ಯ ವಾಮಿಕ, ಅಶ್ವಿ‌ನಿ ಚೇತನ್‌ ಆಚಾರ್ಯ, ಯುಶಾನ್‌, ಕಾರ್ತಿಕ್‌ ಆಚಾರ್ಯ ಮಾಯಿಪ್ಪಾಡಿ, ಧೀಕ್ಷಿತ್‌ ಆಚಾರ್ಯ ವಿವೇಕಾನಂದ ನಗರ ಉಪಸ್ಥಿತರಿದ್ದರು.

ಸತ್ಯನಾರಾಯಣ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಮಹೇಶ ಆಚಾರ್ಯ ಕಲ್ಪಾರೆ ಪ್ರಸ್ತಾವಿಸಿದರು. ಸಮಿತಿಯ ಲಾಂಛನ ವನ್ನು ವರುಣ್‌ ಆಚಾರ್ಯ ಅನಾವರಣಗೊಳಿಸಿ, ಕಿಶೋರ್‌ ಆಚಾರ್ಯ ಕಿನ್ನಿಂಗಾರು ವಂದಿಸಿದರು. ಲಾಂಛನವನ್ನು ಸಂತೋಷ್‌ ಆಚಾರ್ಯ ಮಾಡಿದ್ದರು. ಹಿರಿಯರಾದ ಗಣೇಶ್‌ ಆಚಾರ್ಯ ಶೇಣಿ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next