Advertisement

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

02:28 PM Jul 06, 2024 | Team Udayavani |

ಭಾರತೀಯ ಪುರಾಣಗಳ ಮೆಲುಕು ಅದರ ಸಾರ ಇಂದಿಗೂ ಪ್ರಸಕ್ತ ಹಾಗೂ ಅನ್ವಯ. ನಮ್ಮ ಧರ್ಮ ನಮ್ಮ ಸಂಸ್ಕೃತಿಯಲ್ಲಿ ಏನೇ ಕಾರ್ಯ ಪ್ರಾರಂಭಿಸುವ ಮುನ್ನ ಶ್ರೀ ಗಣೇಶ ಎನ್ನುವುದು ಪದ್ಧತಿ. ಅವನು “ಆದ್ಯ ಪೂಜ್ಯ’. 700 ವರ್ಷಗಳ ಪ್ರಾಚೀನ ಮುದ್ಗಲ ಪುರಾಣದ ಬಗ್ಗೆ ಜನ ಸಾಮಾನ್ಯರಿಗೆ ಪರಿಚಯಿಸಲು ಸಂಸ್ಕೃತಿ ಸೆಂಟರ್‌ ಆಫ್‌ ಕಲ್ಚರಲ್‌ ಎಕ್ಸೆಲೆನ್ಸ್‌ ಗಣಪತಿಯ ಅಷ್ಟ ಅವತಾರಗಳ ಕಿರು ಪರಿಚಯ ನೃತ್ಯ ರೂಪಕದ ಮೂಲಕ ಭಾರತೀಯ ವಿದ್ಯಾ ಭವನದಲ್ಲಿ ಜೂ.28ರಂದು ಸಂಜೆ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ| ನಂದಕುಮಾರ, ಡಾ| ರಿಷಿ ಹಂಡಾ, ತೇಜೇಂದ್ರ ಶರ್ಮಾ ಎಂಬಿಇ, ಕೌನ್ಸಿಲರ್‌ ಕಾರ್ತಿಕ್‌ ಬೊಂಕೂರ್‌, ಕೌನ್ಸಿಲರ್‌ ಶರದ್‌ ಕುಮಾರ್‌ ಝಾ ದೀಪ ಬೆಳಗಿಸುವ ಮೂಲಕ ಶುಭ ಸಂಜೆಗೆ ನಾಂದಿ ಹಾಡಿದರು. ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ| ನಂದಕುಮಾರ್‌ ಅವರು ವಿಷ್ಣುವಿನ ದಶಾವತಾರ ಜನಪ್ರಿಯ ಆದರೆ ಗಣಪತಿಯ ಅವತಾರಗಳ ಬಗ್ಗೆ ಇಂತಹ ಒಂದು ಕಾರ್ಯಕ್ರಮ ಶ್ಲಾಘನೀಯ ಎಂದರು.

ಪ್ರಸಿದ್ಧ ವೀಣಾ ವಾದರಕಾರದ ಪ್ರಮೋದ್‌ ರುದ್ರಪಟ್ಣ ಅವರು ಮುತ್ತುಸ್ವಾಮಿ ದೀಕ್ಷಿತಾರ್‌ ಅವರ ವಾತಾಪಿ ಗಣಪತಿ ಕೃತಿಯನ್ನು ವೀಣೆಯಿಂದ ಹಂಸಧ್ವನಿ ರಾಗ ಹಾಗೂ ಸತೀಶ್‌ ಗುಮ್ಮಡವೆಲ್ಲಿ ಅವರ ಮೃದಂಗದ ಸಂಗಡ ಭಕ್ತಿ ಭಾವವನ್ನು ಮೂಡಿಸಿತು.

ಗಣೇಶ ಕೌತ್ವಂ ಕೃತಿಯನ್ನು ಶ್ರೇಯಾ ಮತ್ತು ಕೃತಿಕಾ ಹಾಗೂ ಗಣೇಶ ಅಂಜಲಿ ಕೃತಿಯನ್ನು ದೀಕ್ಷಾಗ ಸರವಣನ್‌, ಜನನಿ ರಾಜೇಶ್‌, ಜನನ್ಯಶ್ರೀ ಕಾರ್ತಿಕ್‌, ಮಧುಶ್ರೀ ಪ್ರಸನ್ನ, ಸಾನ್ವಿ ಕುಮಾರ್‌ ಮತ್ತು ಸಾನ್ವಿ ಪವನ್‌ ಅವರಿಂದ ನೃತ್ಯ ರೂಪಕದಿಂದ ಪ್ರೇಕ್ಷಕರನ್ನು ಮನೋರಂಜಿಸಿದರು.

ಗಜಾನನ ಅಷ್ಟ ಅವತಾರಗಳ ಅವಾಹನ ಪ್ರಸ್ತುತಿಯನ್ನು ಸಂಸ್ಕೃತಿ ಸೆಂಟರ್‌ನ ವಿದ್ಯಾರ್ಥಿಯರಾದ ಅದಿತಿ ಮೋಟೆ, ಅಹನಾ ಹೆಗ್ಡೆ, ಅನನ್ಯಾ, ಅನುಜಾ ತಿರುಮಲಶೆಟ್ಟಿ, ಆಯತಿ ಯುವರಾಜ್‌, ದೇವಾಂಶಿ ಉಪ್ಪುಲ, ದಿಯಾ ವಿಶ್ವನಾಥ್‌, ದಿಯಾ ಷಣ್ಮುಗಂ, ಮೀರಾ ಶಾಜಿ, ಸಂವಿತಾ ಗುಂಡ, ಸಾಯಿ ಸಮೃದ್ಧಿ ವುತ್ಪಾಲ, ಶ್ರಾವಣಿ ಶಿವಶಂಕರ್‌, ಸುಚೇತಾ ಮಂಗಳಗಿರಿ, ಸ್ವೆಚ್ಛಾ ಮಾಣಿಕಿರೆಡ್ಡಿ, ವನಮಾಲಾ ಆಚಾ, ವಿನ್ಮಾಯಿ ಗೋಪತಿ ಮತ್ತು ಯೋಶಿತಾ ಚಾಮರ್ಥಿ ಪ್ರಸ್ತುತ ಪಡಿಸಿದರು.

Advertisement

ವಕ್ರತುಂಡ ಮತ್ಸರಾಸುರನ ಮರ್ದನ ಮಾಡುವಾಗ ಆಶ್ಚರ್ಯಕರವಾಗಿ ಈ ರೂಪದಲ್ಲಿ ಇದು ಸಿಂಹ ವಾಹನಾಗಿದ್ದಾನೆ. ಏಕದಂತನು ಮದಾಸುರನನ್ನು ನಾಶಪಡಿಸುತ್ತಾನೆ. ಮಹೋದರನು ಮೋಹಾಸುರನನ್ನು ನಾಶಪಡಿಸುತ್ತಾನೆ. ಗಜಾನನನು ಲೋಭಾಸುರನನ್ನು ನಾಶಪಡಿಸುತ್ತಾನೆ. ಈ ಅವತಾರಗಳನ್ನು ಅನ್ವಿ ಪ್ರಭು, ಹೃಷಿಕೇಶ್‌ ಕಿಝಿಕ್ಕಿಯಿಲ್‌, ಲಕ್ಷ್ಮೀ ಪಿಳ್ಳೈ, ಮಂಜು ಸುನಿಲ್‌, ಮೊನಿದೀಪ ಸೀಲ್‌, ಸಾನ್ವಿಕಾ ಕೊಮ್ಮಿನೇನಿ, ಲಲಿತಾ ಕೋಟ್ಲ , ರಾಗಸುಧಾ ವಿಂಜಮುರಿ ಮತ್ತು ಡಾ| ಶ್ರೀನಿವಾಸ ಪ್ರಸ್ತುತ ಪಡಿಸಿದರು.

ಅಸ್ತಿತ್ವದಲ್ಲಿರುವ ಪಾತ್ರದಲ್ಲಿನ ದುರ್ಗುಣಗಳು ಮತ್ತು ದೋಷಗಳು ಇಂದಿಗೂ ನಮ್ಮಲ್ಲಿ ಕೋಪ, ದುರಾಸೆ, ದುರಹಂಕಾರ, ಅಸೂಯೆ, ಗೊಂದಲ, ಅಹಂಕಾರ ಇವುಗಳಿಂದ ಬಾಂಧವ್ಯ ನಾಶವಾಗುತ್ತವೆ . ನಮ್ಮ ಗ್ರಂಥಗಳಲ್ಲಿ ಗಣೇಶನ ಎಂಟು ರೂಪಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬಹುದು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಜೀವಿಗಳಾಗಿ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸೌಂದರ್ಯವನ್ನು ನಮ್ಮ ಗ್ರಂಥಗಳ ಸಾರವನ್ನು ಉಳಿಸಿ ಬೆಳಸಬಹುದು ಎಂದು ಡಾ| ರಾಗಸುಧಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಪಂಚದಲ್ಲೇ ಪ್ರಪ್ರಥಮ ಬಾರಿ ಮುದ್ಗಲ ಪುರಾಣದ ಬಗ್ಗೆ ಈ ರೀತಿಯ ಪ್ರಸ್ತುತಿ ಎಂದು ಹೆಮ್ಮಪಟ್ಟರು. ಕಾರ್ಯಕ್ರಮದ ಪ್ರಸ್ತುತಿ ರಾಧಿಕಾ ಜೋಶಿ ಹಾಗೂ ವಂದನಾರ್ಪಣೆ ಸುಶೀಲ್‌ ರಾಪಾತ್ವಾರ್‌ ಮಾಡಿದರು. ವರ್ಷಗಳ ಸಂಶೋಧನೆ ಹಾಗೂ ಪರಿಶ್ರಮದ ಪ್ರತಿಫಲವೇ “ಆದ್ಯ ಪೂಜ್ಯ’ ನೃತ್ಯ ರೂಪಕ ಎಂದು ಸಂಸ್ಕೃತಿ ಸೆಂಟರ್‌ನ ಸಂಸ್ಥಾಪಕಿ ಡಾ| ರಾಗಸುಧಾ ವಿಂಜಮೂರಿ ಪ್ರೇಕ್ಷಕರಿಗೆ ತಿಳಿಸಿದರು.

*ರಾಧಿಕಾ ಜೋಶಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next