Advertisement

ಮುಳವಾಡ ಬಳಿ ಹಳಿ ತಪ್ಪಿದ ರೈಲು ಬೋಗಿಗಳು: ತಪ್ಪಿದ ಅನಾಹುತ

11:50 AM Oct 24, 2022 | keerthan |

ವಿಜಯಪುರ: ಚಲಿಸುತ್ತಿದ್ದ ಗೂಡ್ಸ್ ರೈಲು ಬೋಗಿಗಳು ಕೊಂಡಿ ಕಳಚಿ ಆರು ಬೋಗಿಗಳು ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಜೀವಹಾ‌ನಿ ಆಗಿಲ್ಲ.

Advertisement

ಜಿಲ್ಲೆಯ ಮುಳವಾಡ ರೈಲು ‌ನಿಲ್ದಾಣ ಬಳಿ ಘಟನೆ ನಡೆದಿದೆ. ಸೊಲ್ಲಾಪುರದಿಂದ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ರೈಲಿನ ಟ್ರ್ಯಾಕ್ ಕಟ್ ಆಗಿದೆ. ಸರಕು ಸಾಗಾಣಿಕೆ ರೈಲ್ವೇ ಆಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ:ಮೀಸಲಾತಿ ಜಾರಿ ಕುರಿತು ಕೂಡಲೇ ಅಧಿಸೂಚನೆ: ಸಿಎಂ ಬೊಮ್ಮಾಯಿ

ಈ ಘಟನೆಯಿಂದಾಗಿ ವಿಜಯಪುರ ಮಾರ್ಗವಾಗಿ ಸೋಲಾಪುರ, ಹುಬ್ಬಳ್ಳಿ, ಬಾಗಲಕೋಟ, ಗದಗ ಕಡೆ ತೆರಳಬೇಕಿದ್ದ ಆರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ವಿಜಯಪುರ ರೈಲ್ವೇ ಪೊಲೀಸರು, ಪರಿಶೀಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next