Advertisement

ಜೀವ ಬೆದರಿಕೆ: ಪೊಲೀಸ್‌ ರಕ್ಷಣೆ ಕೋರಿದ ಹನಿಪ್ರೀತ್‌ ಮಾಜಿ ಪತಿ

04:38 PM Sep 28, 2017 | Team Udayavani |

ಕರ್ನಾಲ್‌ : ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಮತ್ತು ಆತನ ದತುಪುತ್ರಿ ಹನಿಪ್ರೀತ್‌ ಇನ್ಸಾನ್‌ ನಡುವಿನ ಅಕ್ರಮ ಲೈಂಗಿಕ ಸಂಬಂಧಗಳನ್ನು ಬಹಿರಂಗಗೊಳಿಸಿರುವ ನನಗೆ ಈಗ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಬರುತ್ತಿದೆ ಹನಿಪ್ರೀತ್‌ ಳ ಮಾಜಿ ಪತಿ ವಿಶ್ವಾಸ್‌ ಗುಪ್ತಾ ದೂರು ನೀಡಿ ಪೊಲೀಸ್‌ ರಕ್ಷಣೆಯನ್ನು ಕೋರಿದ್ದಾರೆ.

Advertisement

ವಿಶ್ವಾಸ್‌ ಗುಪ್ತಾ ಅವರು ಇಂದು ಗುರುವಾರ ತನ್ನ ತಂದೆ ಮಹೇಂದ್ರ ಗುಪ್ತಾ ಜತೆಗೆ ಕರ್ನಾಲ್‌ ಪೊಲೀಸ್‌ ಠಾಣೆಗೆ ತೆರಳಿ ತನಗೆ ಡೇರಾ ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು ತನಗೆ ಪೊಲೀಸ್‌ ರಕ್ಷಣೆ ಬೇಕು ಎಂದು ಕೋರಿ ದೂರು ದಾಖಲಿಸಿದ್ದಾರೆ. 

ಹನಿಪ್ರೀತ್‌ಳನ್ನು  ವಿಶ್ವಾಸ್‌ ಗುಪ್ತಾ 1991ರಲ್ಲಿ ವಿವಾಹವಾಗಿದ್ದರು. ಅನಂತರ ಆಕೆ ಡೇರಾ ಮುಖ್ಯಸ್ಥನ ಸಂಪರ್ಕಕ್ಕೆ ಬಂದಿದ್ದಳು. ಗುರ್ಮಿತ್‌ ಸಿಂಗ್‌ ಆಕೆಯನ್ನು ತನ್ನ ದತ್ತು ಪುತ್ರಿಯಾಗಿ ಸ್ವೀಕರಿಸಿಯೂ ಆಕೆಯಿಂದ ಗಂಡು ಮಗುವನ್ನು ಪಡೆದು ಅದನ್ನು ಡೇರಾ ಉತ್ತರಾಧಿಕಾರಿಯಾಗಿ ಮಾಡುವ ಹಂಬಲ ಹೊಂದಿದ್ದ. ಹಾಗಾಗಿ ಗುರ್ಮಿತ್‌ ಮತ್ತು ಹನಿಪ್ರೀತ್‌ ನಡುವಿನ ಸಂಬಂಧ ತಂದೆ – ಮಗಳ ಸಂಬಂಧವಾಗಿರದೆ ಆಕೆ ಆತನ ಪ್ರೇಯಿಸಿಯಾಗಿ ಆತನೊಂದಿಗೆ ಹಾಸಿಗೆ ಹಂಚಿಕೊಂಡಿದ್ದಳು ಎಂದು ವಿಶ್ವಾಸ್‌ ಗುಪ್ತಾ ಹೇಳಿದ್ದರು.

ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಮತ್ತು ಹನಿಪ್ರೀತ್‌ ನಡುವಿನ ಅಕ್ರಮ ಸಂಬಂಧವನ್ನು ಬಯಲಿಗೆಳೆದು ಗುರ್ಮಿತ್‌ನ ಪ್ರತಿಷ್ಠೆಗೆ ಮಸಿ ಬಳಿದ ಕಾರಣಕ್ಕೆ ತನಗೆ ಡೇರಾ ದ ಕುರ್ಬಾನಿ ದಳದಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂದು ವಿಶ್ವಾಸ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next