Advertisement

Manipal; ಉಪ ಲೋಕಾಯುಕ್ತ ನ್ಯಾ| ಫ‌ಣೀಂದ್ರ ಕ್ರಮ; 33 ಪ್ರಕರಣಗಳಲ್ಲಿ 18 ಸ್ಥಳದಲ್ಲೇ ಇತ್ಯರ್ಥ

11:34 PM Feb 05, 2024 | Team Udayavani |

ಮಣಿಪಾಲ: ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆ, ತನಿಖೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿ ದೂರುದಾರರು ಹಾಗೂ ಪ್ರತಿವಾದಿಗಳ ಸಮ್ಮುಖದಲ್ಲಿ ಸೋಮವಾರ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫ‌ಣೀಂದ್ರ ವಿಚಾರಣೆ ನಡೆಸಿ, ಸೂಚನೆ, ನಿರ್ದೇಶನ ಹಾಗೂ ಇತ್ಯರ್ಥಕ್ಕೆ ಸಲಹೆ ನೀಡಿದರು.

Advertisement

ಜಿ.ಪಂ.ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 43 ಪ್ರಕರಣಗಳ ಪೈಕಿ 33 ಕ್ಕೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು 18 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ದರು. ಗ್ರಾ.ಪಂ. ಕಂದಾಯಕ್ಕೆ ಸಂಬಂಧಿಸಿದ್ದ ಪ್ರಕರಣ ಹೆಚ್ಚಿದ್ದವು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಲೋಕಾಯುಕ್ತ ಕಚೇರಿ ಹಿರಿಯ ಅಧಿಕಾರಿಗಳಾದ ಚೆನ್ನಕೇಶವ ರೆಡ್ಡಿ, ರಂಗೇಗೌಡ, ಕಿರಣ್‌ ಕುಮಾರ್‌, ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಸೈಮನ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next