Advertisement

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯೂಸ್‌ಲೆಸ್‌: ಹೈಕೋರ್ಟ್‌ ತರಾಟೆ

08:08 AM Jan 18, 2018 | Team Udayavani |

ಬೆಂಗಳೂರು: ಮರಳು ಟೆಂಡರ್‌ ನೀಡುವ ಅವೈಜ್ಞಾನಿಕ ನೀತಿ  ವಿರುದ್ಧ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಇಂತಹ ಆಡಳಿತವನ್ನು ಈ ಹಿಂದೆ ನೋಡಿಯೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.

Advertisement

ಟೆಂಡರ್‌ನಲ್ಲಿ ಹೆಚ್ಚು ಮೊತ್ತದ ಬಿಡ್‌ ಪಾವತಿಸಿದ್ದರೂ ಟೆಂಡರ್‌ ನೀಡದ ಜಿಲ್ಲಾ ಮರಳು ನಿರ್ವಹಣಾ ಸಮಿತಿ ಕ್ರಮ ಪ್ರಶ್ನಿಸಿ ಗದಗ ಜಿಲ್ಲೆ ಮುಂಡರಗಿಯ ಹೇಮಗಿರಿಶ್‌ ಎಂಬುವವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌ ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ರಾಜ್ಯ
ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿತು. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸುತ್ತದೆ. ಮರಳು ಮಾರಾಟಕ್ಕೆ ಅವೈಜ್ಞಾನಿಕ ನೀತಿಗಳನ್ನು ರೂಪಿಸುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯೂಸ್‌ಲೆಸ್‌ ಆಗಿದೆ. ಯಾವುದೇ
ನಿಯಮವನ್ನು ಸೂಕ್ತ ರೀತಿಯಲ್ಲಿ ರೂಪಿಸುವುದಿಲ್ಲ. ಇಂತಹ ಇಲಾಖೆ  ಯನ್ನು ಎಂದೂ ನೋಡಿರಲಿಲ್ಲ ಎಂದು ಕಿಡಿಕಾರಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಮರಳು ಮಾರಾಟಕ್ಕೆ ಟೆಂಡರ್‌ ನೀಡುವ ಸಂಬಂಧ ಉತ್ತಮ ನಿಯಮವಿದೆ ಎಂದು ಸಮರ್ಥಿಸಿಕೊಂಡರಾದರೂ, ಅವರ ವಾದ ತಳ್ಳಿಹಾಕಿದ ನ್ಯಾಯಪೀಠ, ಈ ಅರ್ಜಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಜ.19ಕ್ಕೆ ಮುಂದೂಡಿತು. 

Advertisement

Udayavani is now on Telegram. Click here to join our channel and stay updated with the latest news.

Next