Advertisement
ಮಾ. 29ರ ಬುಧವಾರ ನಡೆ ಯುವ ಫೈನಲ್ ಹೋರಾಟದಲ್ಲಿ ತಮಿಳುನಾಡು ಭಾರತ “ಬಿ’ ತಂಡವನ್ನು ಎದುರಿಸಲಿದೆ. ಭಾರತ “ಬಿ’ ಆಡಿದ ಎರಡು ಪಂದ್ಯ ಗಳಲ್ಲಿ (ಭಾರತ “ಎ’ ಮತ್ತು ತಮಿಳು ನಾಡು) ಜಯಭೇರಿ ಬಾರಿಸಿ ಈಗಾ ಗಲೇ ಫೈನಲಿಗೇರಿತ್ತು. ಇದೀಗ ಸೇಡು ತೀರಿಸಿಕೊಳ್ಳುವ ಅವಕಾಶ ತಮಿಳುನಾಡಿಗೆ ಸಿಕ್ಕಿದೆ. ವಿಜಯ್ ಹಜಾರೆ ಏಕದಿನ ಸರಣಿಯ ಪ್ರಶಸ್ತಿ ವಿಜೇತ ತಮಿಳುನಾಡು ಫೈನಲ್ನಲ್ಲಿ ಯಾವ ರೀತಿಯ ನಿರ್ವಹಣೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಭಾರತ “ಎ’ ದಾಳಿಯನ್ನು ದಂಡಿಸಿದ ಜಗದೀಶನ್ 82 ಎಸೆತ ಗಳಿಂದ 71 ರನ್ ಗಳಿಸಿದರೆ ದಿನೇಶ್ ಕಾರ್ತಿಕ್ 98 ಎಸೆತ ಎದುರಿಸಿ 93 ರನ್ ಹೊಡೆದರು. 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ ಅವರು 7 ರನ್ನಿನಿಂದ ಶತಕ ದಾಖಲಿಸಲು ಅಸಮರ್ಥರಾದರು. ಗೆಲ್ಲಲು ಕಠಿನ ಗುರಿ ಪಡೆದ ಭಾರತ “ಎ’ ತಂಡವು ತಮಿಳುನಾಡಿನ ನಿಖರ ದಾಳಿಯೆದುರು ರನ್ಗಳಿಸಲು ಒದ್ದಾಡಿತಲ್ಲದೇ ಆಗಾಗ್ಗೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆರಂಭಿಕ ಮನ್ದೀಪ್ ಸಿಂಗ್ ಅವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಅಂತಿಮವಾಗಿ ತಂಡ 44.4 ಓವರ್ಗಳಲ್ಲಿ 230 ರನ್ನಿಗೆ ಆಲೌಟಾಯಿತು.
Related Articles
Advertisement