Advertisement

15 ದಿನಕ್ಕೊಮ್ಮೆ ತಲ್ವಾರ್‌ ದಂಪತಿ ದಾಸ್ನಾ ಜೈಲಿಗೆ!

06:35 AM Oct 16, 2017 | Team Udayavani |

ದಾಸ್ನಾ: ಆರುಷಿ – ಹೇಮರಾಜ್‌ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರುಷಿ ಹೆತ್ತವರಾದ ರಾಜೇಶ್‌ ಹಾಗೂ ನೂಪುರ್‌ ತಲ್ವಾರ್‌ ಸೋಮವಾರ ದಸ್ನಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Advertisement

ಆದರೆ, ಬಿಡುಗಡೆಯ ಬಳಿಕವೂ 15 ದಿನಗಳಿಗೊಮ್ಮೆ ಅವರು ಜೈಲಿಗೆ ಬಂದು ಹೋಗಲಿದ್ದಾರೆ. ಏಕೆ ಎಂದು ಯೋಚಿಸುತ್ತಿದ್ದೀರಾ? ಇನ್ನು ಮುಂದೆ ಅವರು ಈ ಜೈಲಿಗೆ ಬರುವುದು ಆರೋಪಿಗಳಾಗಿ ಅಲ್ಲ, ವೈದ್ಯರಾಗಿ. 2013ರ ನವೆಂಬರ್‌ನಿಂದ ಈ ಜೈಲಿನಲ್ಲಿದ್ದ ದಂತ ವೈದ್ಯ ದಂಪತಿ ಇಲ್ಲಿನ ಕೈದಿಗಳಿಗೆ ಔಷಧೋಪಚಾರ ನೀಡಿದ್ದಾರೆ. ಹಾಗಾಗಿ, ಸುಪ್ರೀಂ ಕೋರ್ಟ್‌ ಆಣತಿ ಮೇರೆಗೆ ಅವರು ಬಿಡುಗಡೆಯಾದ ಬಳಿಕವೂ ಕೈದಿಗಳಿಗೆ ದಂತ ಚಿಕಿತ್ಸೆ ನೀಡಲಿದ್ದಾರೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next