Advertisement

ಶಾಶ್ವತ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ

12:27 PM Nov 12, 2019 | Suhan S |

ಗೋಕಾಕ: ಪ್ರವಾಹದಿಂದಾಗಿ ನಿರಾಶ್ರಿತರಾದವರಿಗೆ ಶಾಶ್ವತ ವಸತಿ ಕಲ್ಪಿಸಿಕೊಡಬೇಕೆಂದು ಇಲ್ಲಿಯ ರಾಮ ಫೌಂಡೇಶನ್‌ದ ಪದಾಧಿಕಾರಿಗಳು ಸೋಮವಾರ ಪೌರಾಯುಕ್ತ ವಿ.ಎಸ್‌. ತಡಸಲೂರ ಅವರಿಗೆ ಮನವಿ ಸಲ್ಲಿಸಿದರು.

Advertisement

ಸರ್ಕಾರವು ನೆರೆ ಹಾವಳಿಗೆ ಒಳಗಾದ ರೈತರಿಗೆ ಬೆಳೆ ಹಾನಿ, ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಮತ್ತು ಜೀವಹಾನಿ ಆದವರ ಕುಟುಂಬಕ್ಕೆ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ನೆರೆ ಹಾವಳಿಯಿಂದ ಹಾನಿಗೊಳಗಾದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನಿರಾಶ್ರಿತ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಈಗ ತಾತ್ಕಾಲಿಕವಾಗಿ ಆಶ್ರಯ ಬಡಾವಣೆಯ ಹತ್ತಿರವಿರುವ ಅರಣ್ಯ ಇಲಾಖೆಯ ಖಾಲಿ ಜಾಗದಲ್ಲಿ ಶೆಡ್‌ ನಿರ್ಮಿಸಿ ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ. ಅರಣ್ಯ ಇಲಾಖೆಯವರು 3 ತಿಂಗಳು ಮಾತ್ರ ಅಲ್ಲಿ ವಾಸಿಸಲು ಅನುಮತಿ ನೀಡಿದ್ದು, ನಂತರ ನಿರಾಶ್ರಿತರು ಎಲ್ಲಿ ವಾಸಿಸಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ ನಗರಸಭೆಯಿಂದ ನಿವೇಶನ ಮಂಜೂರು ಮಾಡಿ ಸರ್ಕಾರದ ಅನುದಾನದಲ್ಲಿ ನಿವೇಶನ ಕಲ್ಪಿಸಿ ಆ ಕುಟುಂಬಗಳಿಗೆ ಶಾಶ್ವತ ವಸತಿ ಕಲ್ಪಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ರಾಮ ಫೌಂಡೇಶನ್‌ ಅಧ್ಯಕ್ಷ ವಿಷ್ಣು ಲಾತೂರ, ಪದಾಧಿಕಾರಿಗಳಾದ ಕೆಂಪಣ್ಣಾ ಚಿಂಚಲಿ, ಕೆ.ಬಿ.ಕುರಬೇಟ, ಶೇಖರ ಉಳ್ಳೇಗಡ್ಡಿ, ಜಿ.ಆರ್‌.ನಿಡೋಣಿ, ರಾಚಪ್ಪ ಅಂದಾನಿ, ರಜನೀಕಾಂತ ಮಾಳ್ಳೋದೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next