Advertisement

ನೂತನ ಪಿಂಚಿಣಿ ಯೋಜನೆ ರದ್ದಿಗೆ ಆಗ್ರಹ

07:36 AM Feb 26, 2019 | |

ಚನ್ನಪಟ್ಟಣ: ನೂತನ ಪಿಂಚಿಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಯೋಜನೆಯನ್ನೇ ಮುಂದುವರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

Advertisement

ಕೇಂದ್ರ ಸರ್ಕಾರವು ನೂತನ ಪಿಂಚಿಣಿ ಯೋಜನೆಯನ್ನು ಜಾರಿಗೊಳಿಸುವ ಅಥವಾ ಕೈಬಿಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಕೇಂದ್ರದ ಈ ನಿಲುವನ್ನು ಆಧರಿಸಿ, ಸರ್ಕಾರ ರಚನೆ ಮಾಡಿರುವ ಅಧಿಕಾರಿಗಳು ಸಮಿತಿ ವರದಿ ಪಡೆದುಕೊಂಡು ಹಳೆಯ ಪಿಂಚಿಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಳೆಯ ಪಿಂಚಿಣಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಸರ್ಕಾರವು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿದ್ದು, ಎನ್‌ಪಿಎಸ್‌ ಯೋಜನೆ ರದ್ದತಿ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಸರ್ಕಾರ ಅನುಷ್ಠಾನ ಮಾಡಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಗೌಡ, ಕಾರ್ಯದರ್ಶಿ ಹೇಮಾವತಿ, ಸರ್ಕಾರಿ ನೌಕರರ ಸಂಘದ ಸದಸ್ಯರಾದ ಸೌಭಾಗ್ಯ, ಅಶ್ವಿ‌ನಿ, ಸರಸ್ವತಿ, ರಮೇಶ್‌, ಪ್ರಕಾಶ್‌, ಗುಂಡಪ್ಪ, ಜಯಲಕ್ಷ್ಮೀ, ರವಿಕುಮಾರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next