Advertisement

ದಿಲ್ಲಿಯಲ್ಲಿ ದೇಶದ ಅತಿ ದೊಡ್ಡ ಕೋವಿಡ್‌ ಕೇರ್‌ ಸೆಂಟರ್‌

03:00 AM Jun 26, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ದಿಲ್ಲಿಯಲ್ಲಿ ದೇಶದಲ್ಲೇ ದೊಡ್ಡದಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ.

Advertisement

ದಿಲ್ಲಿಯ ಹೊರವಲಯದಲ್ಲಿರುವ ವಿಶಾಲವಾದ ರಾಧಾ ಸೋಮಿ ಸತ್ಸಂಗ ಬಿಯಾಸ್‌ ಕ್ಯಾಂಪಸ್‌ನಲ್ಲಿ ತಾತ್ಕಾಲಿಕ 10,208 ಬೆಡ್‌ಗಳನ್ನು ಅಳವಡಿಸಲಾಗುತ್ತಿದೆ.

ಈ ಕ್ಯಾಂಪಸ್‌ ಸುಮಾರು 22 ಫ‌ುಟ್‌ಬಾಲ್‌ ಕ್ರೀಡಾಂಗಣಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇದಕ್ಕೆ ಸರ್ದಾರ್‌ ಪಟೇಲ್‌ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಹಾಸ್ಟಿಟಲ್‌ ಎಂದು ಹೆಸರಿಡಲಾಗಿದೆ.

ಆಸ್ಪತ್ರೆಯಾಗಿ ಮಾರ್ಪಟ್ಟ ಕ್ಯಾಂಪಸ್‌: ಈ ಕ್ಯಾಂಪಸ್‌ 1,700 ಅಡಿ ಉದ್ದ, 700 ಅಡಿ ಅಗಲ ಹಾಗೂ 200 ಆವರಣಗಳನ್ನು ಒಳಗೊಂಡಿದೆ. ಇಲ್ಲಿನ ನೆಲ ಮಣ್ಣಿನಿಂದ ಕೂಡಿದ್ದು, ಕಾಪೆìಟ್ಸ್‌ನಿಂದ ಮುಚ್ಚಲಾಗಿದೆ.

ಇದರ ಮೇಲೆ ವಿನೈಲ್‌ ಶೀಟ್‌ ಹಾಕಲಾಗಿದ್ದು, ಸ್ವಚ್ಛಗೊಳಿಸಲು ಸುಲಭವಾಗುವಂತೆ ಮಾಡಲಾಗಿದೆ. ಕ್ಯಾಂಪಸ್‌ ಅನ್ನು 116 ವಿಭಾಗ ಮಾಡಲಾಗಿದ್ದು, ಪ್ರತಿ ವಿಭಾಗಕ್ಕೆ 88 ಬೆಡ್‌ನ‌ಂತೆ 10,208 ಬೆಡ್‌ಗಳನ್ನು ಅಳವಡಿಸಲಾಗುತ್ತಿದೆ.

Advertisement

ಈಗಾಗಲೇ 2 ಸಾವಿರ ಬೆಡ್‌ಗಳನ್ನು ಸಿದ್ಧಪಡಿಸಲಾಗಿದ್ದು, ಜುಲೈ ಮೊದಲ ವಾರದಲ್ಲಿ 10,208 ಹಾಸಿಗೆಗಳು ಸಿದ್ಧವಾಗ ಲಿವೆ. ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕಾಗಿ ಇಂಡೋ ಟಿಬೇಟಿಯನ್‌ ಗಡಿ ಪಡೆಯನ್ನು ಬಳಸಿಕೊಳ್ಳಲಾಗಿದೆ.

ಬೆಡ್‌ಗಳ ಅಳವಡಿಕೆ: ಈ ಕೇಂದ್ರದಲ್ಲಿ ಪ್ರತಿ 5 ಅಡಿ ಅಂತರದಲ್ಲಿ ಒಂದು ಬೆಡ್‌ ಅಳವಡಿಸಲಾಗಿದೆ. ಕಬ್ಬಿಣದ ಮಂಚಕ್ಕೆ ಹೊದಿಕೆ, ಹಾಸಿಗೆ, ದಿಂಬುಗಳನ್ನು ಕಲ್ಪಿಸಲಾಗಿದೆ. ಪ್ರತಿ ಬೆಡ್‌ಗೆ ಒಂದು ಚೇರ್‌, ಸ್ಟೂಲ್‌, ಕಸದ ಡಬ್ಬಿಯನ್ನು ಇಡಲಾಗಿದೆ.

3 ಬೆಡ್‌ಗಳಿಗೆ ಒಂದರಂತೆ ಫ್ಯಾನ್‌ ಅಳವಡಿಸಲಾಗಿದೆ. ಜತೆಗೆ 18 ಸಾವಿರ ಟನ್‌ ಹವಾ ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಿಕಿತ್ಸಾ ಕೇಂದ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದು ಬೃಹತ್‌ ವಿಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದು ವಿಭಾಗವನ್ನು ವೈದ್ಯರು, ನರ್ಸ್‌ಗಳು ಸೇರಿದಂತೆ ವೈದ್ಯಕೀಯ ಸಿಬಂದಿ ಹಾಗೂ ಮತ್ತೂಂದು ವಿಭಾಗವನ್ನು ಕಮಾಂಡೋಗಳಿಗೆ ಮೀಸಲಿಡಲಾಗಿದೆ.

ಚಿಕಿತ್ಸೆ: ಈ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳ ಸಂಬಂ ಧಿಕರು ಪ್ರವೇಶಿಸಲು ಅವಕಾಶವಿಲ್ಲ. ಆ್ಯಂಬುಲೆನ್ಸ್‌ ಮೂಲಕ ಸೋಂಕಿತರನ್ನು ಇಲ್ಲಿಗೆ ಕರೆದುಕೊಂಡು ಬರಲಾಗುವುದು. ಸಿಬಂದಿಗಳ ಮೂಲಕ ರೋಗಿಗಳಿಗೆ ವಸ್ತುಗಳನ್ನು ತಲುಪಿಸಬಹುದಾಗಿದೆ.

ಇ-ಹಾಸ್ಟಿಟಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದ್ದು, 400 ಕಂಪ್ಯೂಟರ್‌, ಇಂಟರ್‌ನೆಟ್‌, ಮೊಬೈಲ್‌ ಸಂಪರ್ಕ ಕಲ್ಪಿಸಲಾಗಿದೆ. ಈ ಕೇಂದ್ರವು ಚೀನದಲ್ಲಿ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕಿಂತ 10 ಪಟ್ಟು ದೊಡ್ಡದ್ದಾಗಿದೆ.

ಮೊಬೈಲ್‌, ಲ್ಯಾಪ್‌ಟಾಪ್‌ ಬಳಸಲು ಸೌಲಭ್ಯ
ಪ್ರತಿ ಬೆಡ್‌ಗೆ ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಂಕಿತರು ಲ್ಯಾಪ್‌ಟಾಪ್‌ ತರಲು ಅವಕಾಶ ನೀಡಲಾಗಿದೆ. ರೋಗಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸ್ವಯಂಸೇವಕರ ಪಡೆಯನ್ನು ನಿಯೋಜಿಸಲಾಗಿದೆ.

ರಾಧಾ ಸೋಮಿ ಸತ್ಸಂಗ ಬಿಯಾಸ್‌ ಸಂಸ್ಥೆಯು ದಿನಕ್ಕೆ 3 ಲಕ್ಷ ಮಂದಿಗೆ ಊಟವನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. 70 ಪೋರ್ಟಬಲ್‌ ಟಾಯ್ಲೆಟ್‌ ಸೇರಿದಂತೆ 600 ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ದಿನಕ್ಕೆ 2 ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿ ಸಿಬಂದಿ ಪಿಪಿಇ ಕಿಟ್‌ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ದಿಲ್ಲಿ ಜಲ ಮಂಡಳಿಯು ನೀರು ಸರಬರಾಜು ಮಾಡಲಿದೆ.

ಐಸೋಲೇಷನ್‌ ನಿಯಮಗಳಲ್ಲಿ ಬದಲು
ದಿಲ್ಲಿ ಸರಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರಕಾರವು ಹೋಂ ಐಸೋ ಲೇಷನ್‌ ಮಾರ್ಗಸೂಚಿಯನ್ನು ಗುರುವಾರ ವಾಪಸ್‌ ಪಡೆದಿದೆ. ಕೋವಿಡ್ 19 ಸೋಂಕಿತರೆಲ್ಲರೂ ಕಡ್ಡಾಯವಾಗಿ ಕೋವಿಡ್‌ ಕೇಂದ್ರದಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ಕೇಂದ್ರ ಸರಕಾರ ಇತ್ತೀಚೆಗೆ ಆದೇಶಿಸಿತ್ತು. ಆದರೆ, ಎಲ್ಲರೂ ಕೋವಿಡ್ 19 ಕೇಂದ್ರಕ್ಕೆ ಬಂದರೆ, ಗೊಂದಲ ಉಂಟಾಗುವುದಲ್ಲದೇ, ವೈದ್ಯಕೀಯ ಸಿಬಂದಿಗೂ ತೀವ್ರ ಹೊರೆಯಾಗಲಿದೆ ಎಂದು ದಿಲ್ಲಿ ಸರಕಾರ ಹೇಳಿತ್ತು.

ಈ ಹಿನ್ನೆಲೆಯಲ್ಲಿ ನಿಯಮ ಬದಲಾಯಿಸಿರುವ ಕೇಂದ್ರ ಸರಕಾರ, ಯಾರಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಲಭ್ಯವಿಲ್ಲವೋ ಅಂಥವರು ಮಾತ್ರ ಕೋವಿಡ್‌ ಕೇಂದ್ರಕ್ಕೆ ಬಂದರೆ ಸಾಕು ಎಂದು ಹೇಳಿದೆ. ಹೀಗಾಗಿ, ಇನ್ನು ಮುಂದೆ ವೈದ್ಯಕೀಯ ತಂಡವೇ ಸೋಂಕಿತರ ಮನೆಗೆ ತೆರಳಿ, ಅವರನ್ನು ಪರೀಕ್ಷೆಗೊಳಪಡಿಸಿ, ಅವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದರೆ ಸಾಕೇ ಅಥವಾ ಕೋವಿಡ್‌ ಕೇರ್‌ ಕೇಂದ್ರಗಳಿಗೆ ಶಿಫ್ಟ್ ಆಗಬೇಕೇ ಎಂಬುದನ್ನು ನಿರ್ಧರಿಸಲಿದೆ ಎಂದು ಡಿಸಿಎಂ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next