Advertisement

ದಿಲ್ಲಿ ಹಿಂಸಾಚಾರ : ತಾಹಿರ್‌, ಪಿಎಫ್ಐ ವಿರುದ್ಧ ಕೇಸು

03:17 PM Mar 12, 2020 | Team Udayavani |

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದಿಂದ ಅಮಾನತಾಗಿರುವ ಕೌನ್ಸಿಲರ್‌ ತಾಹಿರ್‌ ಹುಸೇನ್‌, ಪಿಎಫ್ಐ ಮತ್ತಿತರ ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಪ್ರಕರಣ ದಾಖಲಿಸಿಕೊಂಡಿದೆ.

Advertisement

ಅಕ್ರಮ ಹಣ ಸಾಗಣೆ, ಗಲಭೆ ನಡೆಸಲುಬೇಕಾದ ಹಣ ಪೂರೈಸಿದ ಆರೋಪಗಳು ತಾಹಿರ್‌ ಹುಸೇನ್‌ ಮತ್ತು ಪಿಎಫ್ಐ ಮೇಲಿವೆ. ಅಕ್ರಮ ಹಣಸಾಗಣೆ ಕಾಯ್ದೆ (ಪಿಎಂ ಎಲ್‌ಎ) ಈ ಪ್ರಕರಣಗಳು ದಾಖಲಾಗಿವೆ.

ಗುಪ್ತಚರ ಸಂಸ್ಥೆ ಐಬಿಯ ಅಧಿಕಾರಿಯನ್ನು ಕೊಂದ ಆರೋಪವನ್ನೂ ಎದುರಿಸುತ್ತಿರುವ ತಾಹಿರ್‌, ಈಗ ದಿಲ್ಲಿ ಪೊಲೀಸರ ವಶದಲ್ಲಿದ್ದಾರೆ. ಮುಂದೆ ಅವರನ್ನು ಇಡಿ ವಶಕ್ಕೆ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next