Advertisement

ಸಿಎಂ ಯೋಗಿ ಹೆಸರಿನಲ್ಲಿ ಜಾಹೀರಾತು ಪಡೆಯುತ್ತಿದ್ದ ಪತ್ರಕರ್ತನ ಬಂಧನ!

09:51 PM Jan 30, 2022 | Team Udayavani |

ಭುವನೇಶ್ವರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೆಸರಿನಲ್ಲಿ ತನ್ನ ಸಾಪ್ರಾಹಿಕ ಪತ್ರಿಕೆಗೆ ಜಾಹೀರಾತು ಪಡೆಯುತ್ತಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ 2016ರಲ್ಲಿಯೇ ಎಫ್ಐಆರ್‌ ದಾಖಲಾಗಿತ್ತು.

Advertisement

ಒಡಿಶಾದ ಭುವನೇಶ್ವರದಲ್ಲಿನ ಮನೋಜ್‌ ಕುಮಾರ್‌ ಹೆಸರಿನ ಪತ್ರಕರ್ತ yogiadityanath.mp@gmail.com ಎಂದು ನಕಲಿ ಇ-ಮೇಲ್‌ ಐಡಿ ಮಾಡಿಕೊಂಡಿದ್ದು, ಅದರಿಂದ ಪವರ್‌ ಗ್ರಿಡ್‌ ಕಾರ್ಪೋರೇಷನ್‌, ಗ್ಯಾಸ್‌ ಅಥಾರಿಟಿ ಸೇರಿ ಅನೇಕ ಸಂಸ್ಥೆಗಳಿಗೆ ಜಾಹೀರಾತು ನೀಡುವಂತೆ ಮೇಲ್‌ ಕಳುಹಿಸುತ್ತಿದ್ದ. ಆತ ಯೋಗಿ ಅವರ ನಕಲಿ ಸಹಿಯನ್ನೂ ಬಳಸಿಕೊಳ್ಳುತ್ತಿದ್ದ.

ಈ ಬಗ್ಗೆ ಆಗ ಸಂಸದರಾಗಿದ್ದ ಯೋಗಿ ಅವರ ಆಪ್ತ ಸಹಾಯಕರು ಪೊಲೀಸ್‌ ದೂರು ನೀಡಿದ್ದರು. 2016ರಲ್ಲೇ ಎಫ್ಐಆರ್‌ ದಾಖಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next