Advertisement

ವಿವಾಹ ಪ್ರಸ್ತಾಪಕ್ಕೆ ನಕಾರ: ಪ್ರಿಯತಮೆ ತಂದೆಯನ್ನು ಹತ್ಯೆಗೈದ ಪ್ರಿಯಕರ!

03:41 PM Dec 08, 2020 | Nagendra Trasi |

ನವದೆಹಲಿ:ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕ ಪ್ರಿಯತಮೆಯ ತಂದೆಯನ್ನು ಹತ್ಯೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೋನಿಯಾ ವಿಹಾರ್ ನಿವಾಸಿಯಾಗಿರುವ ಆರೋಪಿ ಸೂರಜ್ ಕುಮಾರ್, ಪಾಲಂ ಮೆಟ್ರೋ ನಿಲ್ದಾಣದಲ್ಲಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆಡಿಟೋರಿಯಂ ಸಮೀಪ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶನಿವಾರ(ಡಿಸೆಂಬರ್ 05, 2020) 50 ವರ್ಷ ಬಿಜೇಂದ್ರ ಸಿಂಗ್ ಮನೆಯಲ್ಲಿ ಹತ್ಯೆಗೀಡಾಗಿದ್ದರು. ಸಿಂಗ್ ಅವರ ತಲೆಯಲ್ಲಿ ಹಲವಾರು ಗಾಯಗಳಾಗಿದ್ದವು ಎಂದು ಸೋನಿಯಾ ವಿಹಾರ್ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ ಮನೆಯೊಳಗೆ ಯಾರೂ ಬಲವಂತವಾಗಿ ಪ್ರವೇಶಿಸಿಲ್ಲ ಎಂಬುದು ಕೂಡಾ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.  ಬಿಜೇಂದ್ರ ಸಿಂಗ್ ಅವರ ದತ್ತು ಪುತ್ರಿ ಸೂರಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಇದನ್ನೂ ಓದಿ:ತಾರಾಲಯ ಕಾಮಗಾರಿಗೆ ಹಿಡಿದಿದೆ ಗ್ರಹಣ! ಅನೈತಿಕ ಚಟುವಟಿಕೆ ತಾಣವಾಗಿದೆ ಜ್ಞಾನಾರ್ಜನೆ ಕಟ್ಟಡ

Advertisement

ಏತನ್ಮಧ್ಯೆ ತಂದೆ ಸಿಂಗ್ ಸೂರಜ್ ಜತೆಗಿನ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು. ಸೂರಜ್ ಪೋಷಕರು ವಿವಾಹ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ಬಿಜೇಂದ್ರ ಸಿಂಗ್ ವಿವಾಹ ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಮಗಳನ್ನು ವಿವಾಹ ಮಾಡಿಕೊಡುವುದಿಲ್ಲ ಎಂದು ಹೇಳಿದ್ದ ಸಿಂಗ್ ಅನ್ನು ಕೊಲೆ ಮಾಡುವ ಸಂಚು ರೂಪಿಸಿರುವುದಾಗಿ ವಿಚಾರಣೆ ವೇಳೆ ಸೂರಜ್ ತಿಳಿಸಿದ್ದ. ಕೆಲವು ದಿನಗಳ ಕಾಲ ಸಿಂಗ್ ಹಾಗೂ ಅವರ ಪತ್ನಿಯ ಚಲನವಲನ ಗಮನಿಸಿರುವುದಾಗಿ ವಿವರಿಸಿದ್ದಾನೆ.

ನವೆಂಬರ್ 28ರಂದು ಆರೋಪಿ ಚೂರಿಯಿಂದ ಸಿಂಗ್ ಗೆ ಇರಿದಿದ್ದ, ನಂತರ ಪ್ರೆಶರ್ ಕುಕ್ಕರ್ ನಿಂದ ಹಲವಾರು ಬಾರಿ ತಲೆಗೆ ಹೊಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next