Advertisement

ದಿಲ್ಲಿ: ಪತ್ನಿಯ ಕೊಂದು ಶಿರಚ್ಛೇದ ಮಾಡಿ ಹಾಸಿಗೆಯಡಿ ಅಡಗಿಸಿಟ್ಟ ಪತಿ 

11:05 AM Feb 15, 2017 | Team Udayavani |

ಹೊಸದಿಲ್ಲಿ : 40ರ ಹರೆಯದ ವ್ಯಕ್ತಿಯೋರ್ವ ತನ್ನ ಮೊದಲ ಪತ್ನಿಯನ್ನು ಹೊಡೆದು ಕೊಂದು, ಆಕೆಯ ದೇಹವನ್ನು ಎರಡು ಭಾಗ ಮಾಡಿ ಶವದ ವಿಲೇವಾರಿ ಮಾಡಲು ಯತ್ನಿಸಿ ಪೊಲೀಸರಿಂದ ಬಂಧಿತನಾದ ಅತ್ಯಂತ ಅಮಾನುಷ ಹಾಗೂ ಆಘಾತಕಾರಿ ಘಟನೆ ವ್ಯಾಲೆಂಟೈನ್‌ ದಿನದಂದು ಬೆಳಕಿಗೆ ಬಂದಿದೆ.

Advertisement

ಮೊದಲ ಪತ್ನಿ 35ರ ಹರೆಯದ ಮನೀಷಾಳನ್ನು ಹೊಡೆದು ಕೊಂದು  ಶಿರಚ್ಛೇದ ಗೈದ ವ್ಯಕ್ತಿಯನ್ನು ಸುಬೋಧ್‌ ಎಂದ ಗುರುತಿಸಲಾಗಿದೆ. ಮನೀಷಾಗೆ ಅನೈತಿಕ ಸಂಬಂಧ ಇದೆ ಎಂಬ ಗುಮಾನಿಯಲ್ಲಿ ಆಕೆಯನ್ನು ಆತ ಫೆ.10 ಮತ್ತು 11ರ ನಡುವಿನ ರಾತ್ರಿಯಲ್ಲಿ ಹೊಡೆದು ಕೊಂದಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸುಬೋಧ್‌ ನಿಂದ ಮೊದಲ ಪತ್ನಿ ಮನೀಷಾಗೆ ಇಬ್ಬರು ಮಕ್ಕಳಿದ್ದಾರೆ. ಈಕೆ ತನ್ನಿಬ್ಬರು ಮಕ್ಕಳೊಂದಿಗೆ ಶಾಕೂರ್‌ಪುರದಲ್ಲಿ ವಾಸವಾಗಿದ್ದಾಳೆ. ಸುಬೋಧ್‌ ತನ್ನ ಎರಡನೇ ಪತ್ನಿ ಮುನಿಯಾ ಹಾಗೂ ಎರಡು ತಿಂಗಳ ಮಗುವಿನ ಜತೆಗೆ ಮಧು ವಿಹಾರದಲ್ಲಿ ವಾಸವಾಗಿದ್ದಾನೆ.

ಫೆ.10-11ರ ರಾತ್ರಿ ಸುಬೋಧ್‌ ತನ್ನ ಮೊದಲ ಪತ್ನಿ ಮನೀಷಾಳನ್ನು ಮಧು ವಿಹಾರದಲ್ಲಿನ ತನ್ನ ಮನೆಗೆ, ಮಾತನಾಡಲು ಬರುವಂತೆ, ಕರೆಸಿಕೊಂಡಿದ್ದಾನೆ. ಆಕೆಯೊಂದಿಗೆ ಆಕೆಯ ಇಬ್ಬರು ಮಕ್ಕಳು ಕೂಡ ಬಂದಿದ್ದಾರೆ. 

ಮೈಮೇಲೆ ಆವೇಶ ಬಂದವನಂತೆ ಪತಿ ಸುಬೋಧ್‌ ಪತ್ನಿ ಮನೀಷಾಳ ಮೇಲೆ ನಿರ್ದಯವಾಗಿ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಾನೆ. ಎರಡನೇ ಪತ್ನಿ ಮುನಿಯಾ, ಮತ್ತು ತನ್ನ ಇಬ್ಬರು ಮಕ್ಕಳು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸುಬೋಧ್‌, ಮೊದಲ ಪತ್ನಿ ಮನೀಷಾಳ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ.

Advertisement

ಮಾರಣಾಂತಿಕ ಗಾಯಗಳಿಗೆ ಗುರಿಯಾದ ಮನೀಷಾ ಕೊನೆಗೂ ಸಾವಪ್ಪಿದ್ದಾಳೆ. ಆಗ ಆಕೆಯ ಶವದ ಶಿರಚ್ಛೇದ ಮಾಡಿ, ದೇಹವನ್ನು ತುಂಡರಿಸಿ, ಬ್ಯಾಗ್‌ನೊಳಗೆ ತುರುಕಿ ಅದನ್ನು ಬಾಕ್ಸ್‌-ಬೆಡ್‌ನ‌ ಒಳಗಡೆ ಇರಿಸಿದ್ದಾನೆ. 

ಮರುದಿನ ಸುಬೋಧ್‌ನ ಮನೆಯಿಂದ ಶವದ ದುರ್ನಾತ ಹೊರ ಬರಲು ಆರಂಭಿಸಿದಾಗ ಶಂಕೆಪಟ್ಟ ನೆರೆಕರೆಯವರು ಒಡನೆಯೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಧಾವಿಸಿ ಬಂದ ಪೊಲೀಸರು ಶವವನ್ನು ತುಂಡರಿಸಿ ಅಡಗಿಸಿಡಲಾಗಿದ್ದ  ಪೆಟ್ಟಿಗೆಯನ್ನು ಪತ್ತೆ ಹಚ್ಚಿ ಸುಬೋಧ್‌ನನ್ನು ಬಂಧಿಸಿದ್ದಾರೆ. 

ಪೊಲೀಸರು ಈ ಅತ್ಯಮಾನುಷ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next