Advertisement

ವಂಚಕನಿಗೆ ನೆರವು: 82 ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ

06:30 PM Oct 19, 2022 | Team Udayavani |

ನವದೆಹಲಿ: ವಂಚಕ ಸುಕೇಶ್‌ ಚಂದ್ರಶೇಖರ್‌ಗೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಇಲಾಖೆಯ 82 ಅಧಿಕಾರಿಗಳ ವಿರುದ್ಧ ತನಿಖೆಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಬುಧವಾರ ಅನುಮತಿ ನೀಡಿದ್ದಾರೆ. ಅವರ ವಿರುದ್ಧ ದೆಹಲಿ ಪೊಲೀಸ್‌ ಇಲಾಖೆಯ ಆರ್ಥಿಕ ವಿಭಾಗದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

Advertisement

ಜೈಲಿನಿಂದಲೇ ಸಂಘಟಿತ ಅಪರಾಧಗಳನ್ನು ಎಸಗಲು ವಂಚಕನಿಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಆತ ರೋಹಿಣಿ ಜೈಲಲ್ಲಿ ಇದ್ದಾಗ ಘಾತಕ ಕೃತ್ಯಗಳನ್ನು ಎಸಗಿದ್ದ. ಈ ಬಗ್ಗೆ ದೂರುಗಳು ಕೇಳಿ ಬಂದಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಆಗ 82 ಮಂದಿ ಅಧಿಕಾರಿಗಳು-ಸಿಬ್ಬಂದಿ ಹೆಸರು ಬೆಳಕಿಗೆ ಬಂದಿತ್ತು. ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next