Advertisement

ನಿವೃತ್ತ ಅಧಿಕಾರಿಗಳಿಗೆ ಸರಕಾರಿ ಬಂಗಲೆ ತೊರೆಯಲು ಸೂಚನೆ

12:15 PM Mar 09, 2020 | Team Udayavani |

ಹೊಸದಿಲ್ಲಿ: 87 ನಿವೃತ್ತ ಅಧಿಕಾರಿಗಳಿಗೆ ಸರಕಾರಿ ಬಂಗಲೆಗಳನ್ನು ತೊರೆಯುವಂತೆ ದಿಲ್ಲಿ ಸರಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಜತೆಗೆ, ಸುಮಾರು 4 ಕೋಟಿ ರೂ. ಬಾಕಿ ಹಣವನ್ನು ಪಾವತಿಸುವಂತೆಯೂ ಹೇಳಿದೆ. ಮನೆ ಖಾಲಿ ಮಾಡುವ ಆದೇಶವನ್ನು ನಿವೃತ್ತ ಅಧಿಕಾರಿಗಳಿಗೆ ನೀಡಲಾಗಿದೆ.

Advertisement

ನಿಗದಿತ ಅವಧಿಯಲ್ಲಿ ಮನೆ ಖಾಲಿ ಮಾಡದೇ ಇದ್ದಲ್ಲಿ ಅವರನ್ನು ಅವರ ವಸ್ತುಗಳ ಜತೆ ಹೊರಹಾಕಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. ಕಳೆದ ತಿಂಗಳು ಲೋಕೋ ಪಯೋಗಿ ಇಲಾಖೆ ಪ್ರತಿ ಸರಕಾರಿ ನಿವಾಸಗಳಿಗೂ ತೆರಳಿ ಸಮೀಕ್ಷೆ ನಡೆಸಿತ್ತು. ಅದರಲ್ಲಿ 87 ನಿವೃತ್ತ ಅಧಿಕಾರಿಗಳು ಮನೆ ಖಾಲಿ ಮಾಡದೇ ಇರುವುದು ತಿಳಿದುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next