Advertisement

ಚುನಾವಣಾ ಆಯೋಗಕ್ಕೆ ಲಂಚ: ಹಿರಿಯ ನ್ಯಾಯವಾದಿಗೆ ಜಾಮೀನು

11:55 AM Mar 14, 2018 | Team Udayavani |

ಹೊಸದಿಲ್ಲಿ : ಎಐಎಡಿಎಂಕೆ (ಅಮ್ಮ) ಬಣದ ನಾಯಕ ಟಿ ಟಿ ವಿ ದಿನಕರನ್‌ ಅವರು ಶಾಮೀಲಾಗಿರುವ ಚುನಾವಣಾ ಆಯೋಗಕ್ಕೆ ಲಂಚ ನೀಡಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯಾಗಿರುವ ಹಿರಿಯ ನ್ಯಾಯವಾದಿಗೆ ದಿಲ್ಲಿ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

Advertisement

ವಿಶೇಷ ನ್ಯಾಯಾಧೀಶರಾಗಿರುವ ಅರವಿಂದ ಕುಮಾರ್‌ ಅವರು ಚೆನ್ನೈ ಮೂಲದ ಬಿ ಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿ 50,000 ರೂ.ವೈಯಕ್ತಿಕ ಬಾಂಡ್‌ ಮತ್ತು ಅದೇ ಮೊತ್ತದ ಎರಡು ಶೂರಿಟಿಗಳನ್ನು ಒದಗಿಸುವಂತೆ ಆದೇಶಿಸಿದರು. 

ಕಳೆದ ತಿಂಗಳಲ್ಲಿ ತನಗೆ ಸಮನ್ಸ್‌ ಜಾರಿಯಾದುದನ್ನು ಅನುಸರಿಸಿ ದಿನಕರನ್‌ ಅವರು ಕೂಡ ಇಂದು ಕೋರ್ಟಿನಲ್ಲಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next