Advertisement

ದಿಲ್ಲಿ ಬಿಜೆಪಿ ಮುಖ್ಯಸ್ಥ ಮನೋಜ್‌ ತಿವಾರಿ ಮನೆ ಲೂಟಿ; ನಾಲ್ವರ ಸೆರೆ

10:47 AM May 01, 2017 | Team Udayavani |

ಹೊಸದಿಲ್ಲಿ : ಭಾರತೀಯ ಜನತಾ ಪಕ್ಷದ ಸಂಸದ ಮನೋಜ್‌ ತಿವಾರಿ ಅವರ ಮನೆಗೆ ಭಾನುವಾರ ರಾತ್ರಿ ಯಾರೋ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಮನೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

Advertisement

ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾಗ ದಿಲ್ಲಿ BJP ಘಟಕದ ಅಧ್ಯಕ್ಷರೂ ಆಗಿರುವ ಮನೋಜ್‌ ತಿವಾರಿ ಅವರು ಮನೆಯಲ್ಲಿ ಇರಲಿಲ್ಲ. 

ಸುಮಾರು ಎಂಟರಿಂದ ಹತ್ತು ಮಂದಿ ದುಷ್ಕರ್ಮಿಗಳು ತಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ತಿವಾರಿ ಅವರು ಟ್ವೀಟ್‌ ಮಾಡಿದ್ದಾರೆ. 

‘ನನ್ನ  ಮನೆಯ ಮೇಲೆ ನಡೆದಿರುವ ದಾಳಿಯು ನನ್ನನ್ನು ಕೊಲ್ಲುವ ಉದ್ದೇಶದ್ದಾಗಿದೆ. ಮನೆಯಲ್ಲಿದ್ದ ಇಬ್ಬರು ಕಚೇರಿ ಸಿಬಂದಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಗಾಯಗೊಳಿಸಲಾಗಿದೆ’ ಎಂದು ತಿವಾರಿ ಹೇಳಿದ್ದಾರೆ. 

ತಿವಾರಿ ಅವರ ಮನೆ ಮೇಲಿನ ದಾಳಿಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿಮಾಡಿದೆ. 

Advertisement

ದಾಳಿಕೋರರಿಗೆ ಪೊಲೀಸರ ಯಾವುದೇ ಹೆದರಿಕೆ ಇದ್ದಂತೆ ಕಂಡುಬರಲಿಲ್ಲ; ಅವರು ತಮ್ಮ ದಾಳಿಯ ವೇಳೆ ಬೈಗುಳ ಮಳೆಯನ್ನೇ ಸುರಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೋರ್ವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next