Advertisement

Kalyana Karnataka; ಕೆಕೆಆರ್ ಡಿಬಿ ಗೆ ಕೇಂದ್ರದ ಅನುದಾನ ಕೋರಿ ನಿಯೋಗ: ಡಾ. ಅಜಯಸಿಂಗ್

02:55 PM Sep 17, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಗೆ ಕೇಂದ್ರದಿಂದಲೂ ಅನುದಾನ ನೀಡುವಂತೆ ಕೋರಿ ಕೇಂದ್ರದ ಬಳಿ ನಿಯೋಗ ಹೋಗಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯಸಿಂಗ್ ಹೇಳಿದರು.

Advertisement

ಸಂಪುಟ ಸಭೆ ಮುಂಚೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಕೆಕೆಆರ್ ಡಿಬಿ ಗೆ ಕೇಂದ್ರದಿಂದಲೂ ಅನುದಾನ ದೊರಕುವ ನಿಟ್ಟಿನಲ್ಲಿ ನಿಯೋಗ ಹೋಗಬೇಕೆಂದು ಪ್ರಸ್ತಾಪಿಸಲಾಗಿದ್ದಕ್ಕೆ ಸಿಎಂ ಸಮ್ಮತಿಸಿದ್ದು, ಕೇಂದ್ರದ ಬಳಿ ನಿಯೋಗ ಹೋಗೋಣ ಎಂದಿದ್ದಾರೆ ಎಂದು ಡಾ. ಅಜಯಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಸರ್ಕಾರದಿಂದ 5000 ಕೋ.ರೂ ಅನುದಾನ ನೀಡುವಂತೆ ಕೇಂದ್ರದಿಂದಲೂ ಅನುದಾನ ನೀಡಿದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.‌

371 ಜೆ ವಿಧಿ ತಿದ್ದುಪಡಿ ಜಾರಿಯಾಗಿದ್ದು ಕೇಂದ್ರ ಸರ್ಕಾರದಿಂದ.‌ ಹೀಗಾಗಿ ಕೇಂದ್ರ ಸರ್ಕಾರದಿಂದಲೂ ಅನುದಾನ ದೊರಕುವುದು ಸಮಂಜಸವಾಗಿದೆ.‌ ಕೇಂದ್ರದ ಬಳಿ ನಿಯೋಗ ಹೋಗಬೇಕೆಂಬುದು ಬಹಳ ದಿನಗಳ ಪ್ರಸ್ತಾಪವಿತ್ತು. ಸಚಿವ ಸಂಪುಟದಲ್ಲಿ ಕೇಂದ್ರದಿಂದಲೂ ಅನುದಾನ ನೀಡುವಂತೆ ವಿಷಯ ಪ್ರಸ್ತಾಪ ಜತೆಗೆ ನಿಯೋಗ ಹೋಗುವ ಕುರಿತಾಗಿ ಸಿಎಂ ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಡಾ.‌ಅಜಯಸಿಂಗ್ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next