Advertisement
ಹೌದು. ಪ್ರತಿ ವರ್ಷ ಸರ್ಕಾರ ಶಾಲೆಗಳ ಶೈಕ್ಷಣಿಕ ವರ್ಷವನ್ನು ಮೇ 28-29 ರಂದು ಆರಂಭಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷ ಮಹಾಮಾರಿ ಕೊರೊನಾದಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿ ವಿದ್ಯಾರ್ಥಿಗಳ ಕಲಿಕೆಯ ಮತ್ತು ಮಕ್ಕಳ ಭವಿಷ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಿದ್ದರಿಂದ ಪ್ರಸಕ್ತ ವರ್ಷ ಮೇ 16ರಿಂದ ಅಂದರೆ ಪ್ರತಿ ವರ್ಷಕ್ಕಿಂತ ಹದಿನೈದು ಮುಂಚಿತವಾಗಿಯೇ ಶಾಲೆ ಆರಂಭಿಸಲಾಗಿದೆ.
Related Articles
Advertisement
ಸರ್ಕಾರದ ವಿಳಂಬ ನೀತಿಯಿಂದ ಇಷ್ಟು ದಿನ ವಿದ್ಯಾರ್ಥಿಗಳು ಪಡಬಾರದ ಕಷ್ಟ ಅನುಭವಿಸಿದ್ದು, ಸರ್ಕಾರ ಈಗಲಾದರೂ ವಸತಿ ನಿಲಯದ ಪ್ರವೇಶ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ದಿನ ಮುಂದೂಡದೇ ಬೇಗ ಮುಗಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಬೇಕೆನ್ನುವುದು ಪಾಲಕರ ಒತ್ತಾಯವಾಗಿದೆ.
ಸರ್ಕಾರದ ವಸತಿ ನಿಲಯಗಳಿಗೆ ಅರ್ಜಿ ಕರೆಯಲು ಸರ್ಕಾರದ ವಿಳಂಬ ಧೋರಣೆಯಿಂದ ಮಕ್ಕಳಿಗೆ ನಿತ್ಯವೂ ಹಣ ಕೊಟ್ಟು ಶಾಲೆಗೆ ಕಳುಹಿಸಲು ಹರ ಸಾಹಸಪಡುವಂತಾಗಿದೆ. -ಗ್ಯಾನಪ್ಪ ಪೂಜಾರಿ, ಗ್ರಾಪಂ ಮಾಜಿ ಸದಸ್ಯ, ತಿಮ್ಮಾಪುರ.
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೋಸ್ಕರ ನಡೆಯುತ್ತಿರುವ ವಸತಿ ನಿಲಯಗಳಿಗೆ ಪ್ರತಿ ವರ್ಷ ಹಾಸ್ಟೇಲ್ ಪ್ರವೇಶ ಪ್ರಕ್ರಿಯೆ ಮೇ ಮೊದಲ ವಾರದಲ್ಲಿಯೇ ಆರಂಭವಾಗುತ್ತಿದ್ದವು ಆದರೆ ಪ್ರಸಕ್ತ ವರ್ಷದಲ್ಲಿ ಸ್ವಲ್ಪ ತಡವಾಗಿದೆ. ಸದ್ಯ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು. -ಎಂ.ಎಚ್.ಕಟ್ಟಿಮನಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹುನಗುಂದ.
ಮಲ್ಲಿಕಾರ್ಜುನ ಎಂ ಬಂಡರಗಲ್ಲ