Advertisement

ರಕ್ಷಣಾ ಇಲಾಖೆ ನೆರವು

12:30 AM Jan 05, 2019 | Team Udayavani |

ಉಡುಪಿ: ನಾಪತ್ತೆಯಾಗಿರುವ “ಸುವರ್ಣ ತ್ರಿಭುಜ’ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರ ಪತ್ತೆ ಕಾರ್ಯ ತೀವ್ರಗೊಂಡಿದ್ದು ಇದೀಗ ಕೇಂದ್ರ ರಕ್ಷಣಾ ಇಲಾಖೆಯಿಂದಲೂ ಪತ್ತೆ ಕಾರ್ಯಕ್ಕೆ ನೆರವು ಲಭಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ತಿಳಿಸಿದ್ದಾರೆ. 

Advertisement

ಹೊಸದಿಲ್ಲಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ ಸಂಸದೆ, ನಾಪತ್ತೆಯಾದ ಮೀನುಗಾರರ ತ್ವರಿತ ಪತ್ತೆ ಹಚ್ಚುವಿಕೆಗೆ ಸಹಕರಿಸುವಂತೆ ಮಾಡಿದ ವಿನಂತಿಗೆ ಸ್ಪಂದಿಸಿರುವ ರಕ್ಷಣಾ ಸಚಿವೆ ತತ್‌ಕ್ಷಣವೇ ಮಹಾರಾಷ್ಟ್ರ ಸರಕಾರ ಕೋಸ್ಟ್‌ಗಾರ್ಡ್ಸ್‌ ಮತ್ತು ಭಾರತೀಯ ನೌಕಾಸೇನೆಗೆ ಸಂಪರ್ಕಿಸಿ, ಕಣ್ಮರೆಯಾಗಿರುವ ಮೀನುಗಾರರ ತ್ವರಿತ ಪತ್ತೆ ಹಚ್ಚುವಿಕೆಗೆ ಕೈ ಜೋಡಿಸುವಂತೆ ನಿರ್ದೇಶನ ನೀಡಿದರು. ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಉಪಸ್ಥಿತರಿದ್ದರು.   

ಸಹೋದ್ಯೋಗಿಗಳ ನಾಪತ್ತೆಯಿಂದ ಇಡೀ ಮೊಗವೀರ ಸಮುದಾಯವೇ ಆತಂಕದಲ್ಲಿದೆ. ಅವರ ಪತ್ತೆಗಾಗಿ ಶಾಸಕ ರಘುಪತಿ ಭಟ್‌ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮೀನುಗಾರರ ಜತೆ ನಾನು ಸದಾ ಇದ್ದೇನೆ. ಅವರಿಗಾಗಿ ಹೊಸದಿಲ್ಲಿಗೆ ಹೋಗಬೇಕಾದರೆ ಹೋಗುವುದಕ್ಕೂ ಸಿದ್ಧನಿದ್ದೇನೆ.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ

Advertisement

Udayavani is now on Telegram. Click here to join our channel and stay updated with the latest news.

Next