Advertisement

ತಂಟೆಗೆ ಬಂದವರಿಗೆ ತಕ್ಕಶಾಸ್ತಿ: ಚೀನಾಕ್ಕೆರಕ್ಷಣಾ ಸಚಿವರ ಪರೋಕ್ಷ ಎಚ್ಚರಿಕೆ

02:02 PM Jun 29, 2021 | Nagendra Trasi |

ನವದೆಹಲಿ: “ಭಾರತ, ಶಾಂತಿಪ್ರಿಯ ರಾಷ್ಟ್ರ. ಅದು ಯಾರ ತಂಟೆಗೂ ಹೋಗುವುದಿಲ್ಲ. ಆದರೆ, ತನ್ನ ತಂಟೆಗೆ ಬಂದವರ ಅಥವಾ ಬೆದರಿಕೆ ಹಾಕುವವರಿಗೆ ತಕ್ಕ ಪಾಠ ಕಲಿಸಲು ಸರ್ವಕಾಲಕ್ಕೂ ಸಿದ್ಧ” ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಪಾಕಿಸ್ತಾನ ಹಾಗೂ ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Advertisement

ಸೋಮವಾರ,ಲಡಾಖ್‌ನಭಾರತೀಯ ಸೇನೆಯ ಫಾರ್ವರ್ಡ್‌ ಲೊಕೇಷನ್‌ನಲ್ಲಿ ಆಯೋಜಿಸಲಾಗಿದ್ದ ಸೈನಿಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, “ಭಾರತದ ಉತ್ತರಭಾಗದ ಗಡಿಯಲ್ಲಿ ಕಳೆದ ವರ್ಷ ಹಲವು ಸವಾಲುಗಳನ್ನು ಭಾರತ ಎದುರಿಸಬೇಕಾಯಿತು. ಯೋಧರು ಕೆಚ್ಚೆದೆಯಿಂದ ಈ ಸವಾಲುಗಳನ್ನು ಮೆಟ್ಟಿ ನಿಂತರು.

ಕೆಣಕಿದವರಿಗೆ ಸೂಕ್ತ ಉತ್ತರ ನೀಡುವ ಛಾತಿ ನಮ್ಮ ಸೈನಿಕರಿಗಿದೆ” ಎಂದು ಹೇಳಿದರಲ್ಲದೆ,” ಎಂಥದ್ದೇ ವ್ಯಾಜ್ಯವಿರಲಿ, ಮಾತುಕತೆಯ ಮೂಲಕ ನಿವಾರಣೆಗೆ ಭಾರತ ಬದ್ಧವಾಗಿರುತ್ತದೆ” ಎಂದಿದ್ದಾರೆ. ಸಭೆಯ ನಂತರ, ಕಳೆದವರ್ಷ ಗಾಲ್ವಾನ್‌ ಗಲಭೆಯಲ್ಲಿ ಮೃತಪಟ್ಟ ಯೋಧರ ಸ್ಮಾರಕಕ್ಕೆ
ತೆರಳಿದ ಸಿಂಗ್‌, ಅಲ್ಲಿ ಹುತಾತ್ಮರಿಗೆ ಪುಷ್ಪನ ಮನ ಸಲ್ಲಿಸಿದರು.

ಮೂರು ಸೇತುವೆಗಳ ಲೋಕಾರ್ಪಣೆ:
ಉತ್ತರಾಖಾಂಡ್‌ನ‌ ಪಿತೋರ್‌ಗಢ ಜಿಲ್ಲೆ ಯಲ್ಲಿ ಭಾರತ-ಚೀನಾ ಗಡಿ ಸಮೀಪದ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿ ರುವ ಮೂರು ಸೇತುವೆಗಳನ್ನು ರಾಜನಾಥ್‌ ಸಿಂಗ್‌, ವರ್ಚುವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು. ಉದ್ಘಾಟನೆ ಗೊಂಡ ತವಾಘಾಟ್‌ನ ತವಾಘಾಟ್‌ -ಘಟಿಯಾ ಬಗಾರ್‌ ಸೇತುವೆ, ಕೀರ್ಕು ಟಿಯಾದಲ್ಲಿರುವ ಜೌಲ್ಗಿಬಿ-ಮುನ್ಸ್‌ಯಾರಿ ಸೇತುವೆ ಹಾಗೂ ಲಾಸ್ಪಾದಲ್ಲಿರುವ ಮುನ್ಸ್‌ ಯಾರಿ- ಬುಗ್ಟಿಯಾರ್‌- ಮಿಲಾಮ್‌ ಸೇತುವೆಯನ್ನು ಗಡಿ ರಸ್ತೆ ನಿರ್ಮಾಣ ಒಕ್ಕೂಟ (ಬಿಆರ್‌ಒ) ನಿರ್ಮಿಸಿದೆ. ಇದ ಲ್ಲದೇ, ಬಿಆರ್‌ಒ ದೇಶದ 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಿಸಿದ ಒಟ್ಟು 63 ಸೇತುಗಳನ್ನೂ ಸಚಿವ ಸಿಂಗ್‌ ಲೋಕಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next