Advertisement

Dalit; ದಲಿತ ಸಮ್ಮಾನ್ ಸಮಾರೋಹ್ ದಲ್ಲಿ ಪಾಲ್ಗೊಂಡ ರಾಜ್ ನಾಥ್ ಸಿಂಗ್

04:26 PM Dec 10, 2023 | Team Udayavani |

ಹೊಸದಿಲ್ಲಿ: ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್ ಬಳಿ ಭಾನುವಾರ ನಡೆದ “ದಲಿತ ಸಮ್ಮಾನ್ ಸಮರೋಹ್” ನಲ್ಲಿ ಭಾಗವಹಿಸಿದರು.

Advertisement

ದಲಿತ ಸಮುದಾಯದ ಜನಸಾಮಾನ್ಯರೊಂದಿಗೆ ನೆಲದ ಮೇಲೆ ಕುಳಿತು ಭೋಜನ ಸೇವಿಸುತ್ತಿರುವುದು ಎಎನ್ ಐ ಹಂಚಿಕೊಂಡ ವಿಡಿಯೋದಲ್ಲಿ ಕಂಡುಬಂದಿದೆ.

”50-60 ವರ್ಷಗಳ ಹಿಂದೆ ದಲಿತ ಸಮಾಜ ದುರದೃಷ್ಟಕರ ವಾಸ್ತವ ಅನುಭವಿಸಿತು, ತುಳಿತಕ್ಕೊಳಗಾಯಿತು. ಅವರಿಗೆ ಅವಕಾಶಗಳನ್ನು ನಿರಾಕರಿಸಲಾಯಿತು. ವಾಸ್ತವವನ್ನು ಒಪ್ಪಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಆದರೆ ಈಗಿನ ಕಾಲದ ವಾಸ್ತವವನ್ನು ಅವಲೋಕಿಸಿದರೆ ಪರಿಸ್ಥಿತಿ ಬದಲಾಗಿರುವುದನ್ನು ಕಾಣಬಹುದು” ಎಂದು ರಾಜನಾಥ್ ಹೇಳಿದರು.


ರಾಜ್‌ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರು ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಪ್ರತಿಬಿಂಬಿಸುವುದು ಅವರ ಆದರ್ಶಗಳನ್ನು ಪಾಲಿಸುವುದು. ದಲಿತ ಸಮುದಾಯದವರಲ್ಲಿ ಸಮಾನತೆಯ ಸ್ವೀಕೃತಿ ಇರುವುದನ್ನು ಖಚಿತ ಪಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next