Advertisement

ನಿರ್ದಿಷ್ಟ ಕಾಲಮಿತಿಯೊಳಗೆ ಪಕ್ಷಾಂತರ ಕೇಸು ವಿಲೇವಾರಿ ಅಗತ್ಯ: ವಿಪಿ

03:57 PM Dec 05, 2018 | Team Udayavani |

ಅಮರಾವತಿ : ರಾಜಕೀಯ ಪಕ್ಷಾಂತರದ ಕೇಸುಗಳನ್ನು ನ್ಯಾಯಾಂಗ ಮತ್ತು ಶಾಸಕಾಂಗದ ಸ್ಪೀಕರ್‌ ಗಳು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು, ಇಂತಹ ಕೇಸುಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಅಗತ್ಯವಿದೆ ಎಂದು ಹೇಳಿದರು. 

Advertisement

‘ರಾಜಕೀಯ ಪಕ್ಷಾಂತರದ ಕೇಸುಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಸಂಬಂಧ ಪಕ್ಷಾಂತರ ತಡೆ ಕಾಯಿದೆಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಸುದ್ದಿಗಾರರೊಂದಿಗೆ ಮತ್ತು ತನ್ನ ಕೆಲವು ಆಪ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ ಹೇಳಿದರು. 

‘ಒಬ್ಬ ಶಾಸಕ ಪಕ್ಷಾಂತರ ಮಾಡಿದ್ದಾನೆಯೇ ಇಲ್ಲವೇ ಎಂಬುದನ್ನು ತೀರ್ಮಾನಿಸುವುದರಲ್ಲಿ ಅಂತಹ ದೊಡ್ಡ ಸಂಗತಿಯೇನಿದೆ ? ಅದು ಭಾರೀ ಕಷ್ಟದ ವಿಷಯವಾ ?’ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next