Advertisement

ಗ್ರಾ.ಪಂ ಅಧ್ಯಕ್ಷೆ ವಿರುದ್ಧದ ಅವಿಶ್ವಾಸಕ್ಕೆ ಸೋಲು

06:25 AM Dec 29, 2018 | Team Udayavani |

ಮಹದೇವಪುರ: ಅವಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ದೇವರಾಜ್‌ ವಿರುದ್ಧ ಶುಕ್ರವಾರ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಕೋರಂ ಕೊರತೆಯಿಂದ ಸೋಲುಂಟಾಗಿದೆ.

Advertisement

ಬೆಂಗಳೂರು ಪೂರ್ವ ತಾಲೂಕಿನ ಅವಲಹಳ್ಳಿ ಗ್ರಾ.ಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗಳಿಗೆ ಗ್ರಾ.ಪಂ ಸದಸ್ಯರು ಪತ್ರ ಬರೆದಿದ್ದರು. ಅದರಂತೆ ಶುಕ್ರವಾರ ಪಂಚಾಯಿತಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. 33 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಅವಿಶ್ವಾಸಕ್ಕೆ 17 ಸದಸ್ಯರ ಬೆಂಬಲ ಅಗತ್ಯವಿತ್ತು.

ಆದರೆ ಸಭೆಗೆ 15 ಸದಸ್ಯರು ಮಾತ್ರ ಹಾಜರಾದ ಕಾರಣ ಕೋರಂ ಕೊರತೆ ಉಂಟಾಯಿತು. ಹೀಗಾಗಿ ಜ್ಯೋತಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಉಪವಿಭಾಗಧಿಕಾರಿ ನಾಗರಾಜ್‌ ತಿಳಿಸಿದ್ದಾರೆ. ಸಭೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ತಹಸೀಲ್ದಾರ್‌ ರಾಮಲಕ್ಷ್ಮಯ್ಯ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next