Advertisement

ಮಾನಹಾನಿ ಖಟ್ಲೆ; ವಿಚಾರಣೆಗೆ ತಡೆ ಇಲ್ಲ

02:30 AM Mar 31, 2017 | Team Udayavani |

ಹೊಸದಿಲ್ಲಿ: ಡಿಡಿಸಿಎ ಹಗರಣದಲ್ಲಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಖುದ್ದು ಹಾಜರಾಗುವುದಕ್ಕೆ ದಿಲ್ಲಿ ಹೈಕೋರ್ಟ್‌ ವಿನಾಯಿತಿ ನೀಡಿದೆ. ಆದರೆ ಸ್ಥಳೀಯ ಕೋರ್ಟ್‌ ಆದೇಶಿಸಿದಂತೆ ವಿಚಾರಣೆ ಎದುರಿಸಲೇಬೇಕು ಎಂದು ಹೇಳಿದೆ. ನ್ಯಾಯಮೂರ್ತಿ ಐ.ಎಸ್‌.ಮೆಹ್ತಾ ಗುರುವಾರ ಈ ಆದೇಶ ನೀಡಿದ್ದಾರೆ. ಎ.6ರಂದು ಸ್ಥಳೀಯ ಕೋರ್ಟಲ್ಲಿ ವಿಚಾರಣೆ ಆರಂಭವಾಗಲಿದೆ. ತಮ್ಮ ವಿರುದ್ಧ ಕೆಳಹಂತದ ನ್ಯಾಯಾಲಯ ವಿಚಾರಣೆ ಎದುರಿಸಬೇಕೆಂದು ಹೇಳಿರುವುದು ಗಂಭೀರ ಪ್ರಕರಣ ಎಂದು ಅರವಿಂದ ಕೇಜ್ರಿವಾಲ್‌ ಮತ್ತು ಡಿಸಿಎಂ ಮನೀಶ್‌ ಸಿಸ್ಸೋಡಿಯಾ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next