Advertisement

ಸಿಡಿಲಿಗೆ ಮೃತಪಟ್ಟ ಚಿಗರೆ: ಅರೆ-ಬರೆ ಹೂತು ಹಾಕಿದ ಅರಣ್ಯ ಸಿಬ್ಬಂದಿ

06:56 PM Jun 03, 2022 | Team Udayavani |

ಕುಷ್ಟಗಿ: ಮುದೇನೂರು ತೋಳದ ಹಳ್ಳದ ಬಳಿ ಸಿಡಿಲಿಗೆ ಆಘಾತಕ್ಕೆ ಮೃತಪಟ್ಟ ಚಿಗರೆಯ ಕಳೆಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಹನುಮಸಾಗರ ಗುಡ್ಡದಲ್ಲಿ ಅವಲಂಬಿತ ಪ್ರಾಣಿಗಳಿಗೆ ಅಹಾರ ಜೀವಾಣು ವೃದ್ದಿಸಲು ಕೊಳೆಯುವಿಕೆಗೆ ಅರೆ-ಬರೆ ಮುಚ್ಚಲಾಗಿದೆ.

Advertisement

ಕಳೆದ ಜೂನ್ 1ರಂದು ಸಿಡಿಲಿನ ಶಬ್ದಕ್ಕೆ ಹೆದರಿ ಗರ್ಭ ಧರಿಸಿದ್ದ ಚಿಗರೆ ಮೃತಪಟ್ಟಿತ್ತು. ತಾವರಗೇರಾ ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗನಿ ಅವರ ನೇತೃತ್ವದ ಅರಣ್ಯ ಸಿಬ್ಬಂದಿ ಭೇಟಿ ಸ್ಥಳ ಪರಿಶೀಲನೆ ನಡೆಸಲಾಯಿತು. ನಂತರ ಕಲಕೇರಿ ಸಸ್ಯ ಕ್ಷೇತ್ರದಲ್ಲಿ ಪಶು ವೈದ್ಯ ಡಾ. ಸಂತೋಷ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಹನುಮಸಾಗರ ಗುಡ್ಡದಲ್ಲಿ ಸತ್ತ ಚಿಗರೆಯನ್ನು ಅರೆ-ಬರೆ ಹೂತು ಹಾಕಲಾಯಿತು.

ಈ‌ ಕುರಿತು ಉಪ ವಲಯ ಅರಣ್ಯಧಿಕಾರಿ ರಿಯಾಜ್ ಗನಿ ಪ್ರತಿಕ್ರಿಯಿಸಿ, ಕಾಡಿನಲ್ಲಿ ಸತ್ತ ಪ್ರಾಣಿಯನ್ನು ಸಂಸ್ಕಾರ ಮಾಡುವಂತಿಲ್ಲ. ಬದಲಿಗೆ ಸತ್ತ ಪ್ರಾಣಿಯ ಶವ ಪರೀಕ್ಷೆ ನಡೆಸಿ ಕಾಡು ಪ್ರದೇಶದಲ್ಲಿ ಅರೆಬರೆಯಾಗಿ ಹೂತು ಹಾಲಾಗಿದೆ. ಇದರಿಂದ ಅವಲಂಬಿತ ಪ್ರಾಣಿ, ಪಕ್ಷಿಗಳಿಗೆ ಸತ್ತ ಪ್ರಾಣಿಯ ಅಹಾರ ಸಿಗುತ್ತದೆ.ಸತ್ತ ಪ್ರಾಣಿ ಬಹುಬೇಗನೆ ಕೊಳೆಯುವಿಕೆಯಿಂದ ಭೂಮಿಯಲ್ಲಿ ಜೀವಾಣು ವೃದ್ದಿಸಿ ಸಮತೋಲನ ಕಾಯ್ದುಕೊಳ್ಳಲು ಸಾದ್ಯವಾಗಿದೆ. ಇದು ಇಲಾಖಾ ಆದೇಶವಾಗಿದ್ದು ಅದೇ ಪ್ರಕಾರ ಅನುಪಾಲಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next