Advertisement

ಜಿಂಕೆ ಕೊಂಬು ಸಾಗಾಟ: ಐವರ ವಶ 

05:20 AM Jan 11, 2019 | |

ಕುಂದಾಪುರ: ಆಮ್ನಿ ಕಾರಿನಲ್ಲಿ ಸುಮಾರು 21 ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಐವರನ್ನು ಕುಂದಾಪುರದ ಅರಣ್ಯಾಧಿಕರಗಳ ತಂಡ ಕೋಟೇಶ್ವರದ ಬೈಪಾಸ್‌ ಬಳಿ ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. 

Advertisement

ಹೆಂಗವಳ್ಳಿಯ ರವಿ (35), ಕುಂದಾಪುರದ ದಿನೇಶ ಗಾಣಿಗ (54), ಅಲಾºಡಿಯ ದೀಪಕ್‌ (32), ಉದಯ ನಾಯ್ಕ (34), ರವಿಚಂದ್ರ ಶೆಟ್ಟಿ (32) ಅವರನ್ನು ವಶಕ್ಕೆ ಪಡೆದಿದ್ದಾರೆ.ಸುಮಾರು ಲಕ್ಷಾಂತರ ರೂ. ಮೌಲ್ಯದ 21 ಜಿಂಕೆ ಕೊಂಬು ಹಾಗೂ ಸಾಗಾಟಕ್ಕೆ ಬಳಸಿದ ಆಮ್ನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕುಂದಾಪುರ ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next