Advertisement

ದೀಪಕ್‌ ಯಾವುದೇ ಸಂಘಟನೆಗೆ ಸೇರಿದವರಲ್ಲ

06:25 AM Jan 05, 2018 | Team Udayavani |

ಬೆಂಗಳೂರು: ದೀಪಕ್‌ ರಾವ್‌ ಯಾವುದೇ ಸಂಘಟನೆಗೆ ಸೇರಿದವರಲ್ಲ. ಬಡ ಕುಟುಂಬದಿಂದ ಬಂದ ದೀಪಕ್‌ಗೆ
ಮೊಬೈಲ್‌ ಅಂಗಡಿಯಲ್ಲಿ ಕೆಲಸ ಕೊಟ್ಟಿದ್ದು ಮಸ್ಜಿದ್‌ ಎಂಬ ಮುಸ್ಲಿಂ, ಹೀಗಾಗಿ ದೀಪಕ್‌ ಹತ್ಯೆ ಬಗ್ಗೆ ಮುಖ್ಯಮಂತ್ರಿ
ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಸೂರತ್ಕಲ್‌ ಗಲಭೆಯಲ್ಲಿ ಗಾಯಗೊಂಡಿರುವ ಮುಸ್ಲಿಂ ಯುವಕನ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ಪಿಎಫ್ಐ, ಎಸ್‌ಡಿಪಿಐ ನಿಷೆಧಿಸಿ: ಕಾಂಗ್ರೆಸ್‌ ಪಕ್ಷ ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ಯಾವತ್ತೂ
ಬೆಂಬಲಿಸುವುದಿಲ್ಲ. ಎರಡೂ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿ. ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ
ಮೊದಲು ಸಂಸತ್ತಿನಲ್ಲಿ ಪ್ರಸ್ತಾಪಿಸಲಿ ಎಂದು ಒತ್ತಾಯಿಸಿದರು.

ಪ್ರತಾಪ್‌ ಸಿಂಹ ಟ್ವೀಟ್‌ಗೆ ತಿರುಗೇಟು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 21 ಜನ ಹಿಂದುಗಳ ಹತ್ಯೆಯಾಗಿದೆ ಎಂದು ಟ್ವೀಟ್‌ ಮಾಡಿರುವ ಸಂಸದ ಪ್ರತಾಪ್‌ ಸಿಂಹ ಅವರಿಗೆ ತಿರುಗೇಟು ನೀಡಿರುವ ಖಾದರ್‌, ಹರೀಶ್‌ ಪೂಜಾರಿ, ಅಶ್ರಫ್, ವಿನಾಯಕ್‌ ಬಾಳಿಗಾ, ಬ್ರಹ್ಮಾವರದಲ್ಲಿ ಪ್ರೀತಂ ಕೊಲೆಯಾಗಿದ್ದಾರೆ. ಅವರನ್ನೆಲ್ಲಾ ಯಾಕೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next