Advertisement
ಮಾಜಿ, ಹಾಲಿ ಶಾಸಕರ ಶ್ರಮಬಜಪೆ ಮತ್ತು ಮಳವೂರು ಗ್ರಾ.ಪಂ. ಗಳ ನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್ ರೂಪಿಸುವ ಬಗ್ಗೆ 2017ರಲ್ಲಿ ಅಂದಿನ ಶಾಸಕ ಕೆ. ಅಭಯಚಂದ್ರ ಅವರು ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದರು. ಜತೆಗೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾ.ಪಂ.ಗಳನ್ನೊಳಗೊಂಡ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಘೋಷಣೆಗೆ ಮನವಿ ಮಾಡಿದ್ದರು. ಸಚಿವರು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯ, ನೆರೆಯ ರಾಜ್ಯದ ಜನರು ವಿದೇಶಕ್ಕೆ ಹೋಗುತ್ತಿರುವುದರಿಂದ ಆ ಪ್ರದೇಶಕ್ಕೆ ಹೆಚ್ಚುವರಿ ಮೂಲ ಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂಬ ಶಾಸಕರ ಮನವಿ ಪರಿಗಣಿಸಿ, ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ಸಲ್ಲಿಸಲು ಸೂಚಿಸಿ ಟಿಪ್ಪಣಿ ಬರೆದಿದ್ದರು. ಆದರೆ ಅನು ಮೋದನೆಗೊಂಡಿರಲಿಲ್ಲ.
ಬಜಪೆ ಪಟ್ಟಣ ಪಂಚಾಯತ್ ಘೋಷಣೆಯಿಂದ ಸರಕಾರದ ವಿವಿಧ ಯೋಜನೆಗಳ ಮೂಲಕ ವಿಶೇಷ ಅನುದಾನ ದೊರಕುವುದರಿಂದ ಸ್ಥಳೀಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ಎಸ್.ಎಫ್.ಸಿ. ಅನುದಾನ, 15ನೇ ಹಣಕಾಸು ಆಯೋಗದಡಿ ಸುಮಾರು 3 ಕೋ.ರೂ., ನಗರೋತ್ಥಾನ ಯೋಜನೆಯಲ್ಲಿ ವಿಶೇಷ ಅನುದಾನ ಒದಗಿಬರುವುದರಿಂದ ಮೂಲಸೌಲಭ್ಯ, ರಸ್ತೆ ಅಭಿವೃದ್ಧಿಗೆ ಪೂರಕವಾಗಲಿದೆ.
Related Articles
ಇನ್ನು ಮುಂದೆ ಗ್ರಾಮ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಜಿ.ಪಂ. ಸದಸ್ಯರು ಇರುವುದಿಲ್ಲ. ಅದರ ಬದಲು ಜನಪ್ರತಿನಿಧಿಯಾಗಿ ಕೌನ್ಸಿಲರ್ ಇರುತ್ತಾರೆ. ಸುಮಾರು 600ರಿಂದ 1,000 ಮತದಾರರಿಗೆ ಓರ್ವ ಕೌನ್ಸೆಲರ್ಇರುತ್ತಾರೆ. ಇದು ಕೆಲವು ಕಡೆ ಹೆಚ್ಚು ಕಡಿಮೆ ಇರುತ್ತದೆ.
Advertisement
ಬಜಪೆ ಪಟ್ಟಣ ಪಂಚಾಯತ್ನ ವರದಿ, ಮಾರ್ಗದರ್ಶನವನ್ನು ಅನುಸರಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೂಡ ವರದಿಯನ್ನು ಸಲ್ಲಿಸಿತ್ತು. ಬಜಪೆ ಗ್ರಾಮ ಪಂಚಾಯತ್ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್ ಈ ನಿಟ್ಟಿನಲ್ಲಿ ಒಂದಾಗಿ ಕಾರ್ಯ ನಿರ್ವಹಿಸಿತ್ತು. ಅದರಂತೆ ಅನುಮೋದನೆಯೂ ಸಿಕ್ಕಿದ್ದು ಎರಡೂ ಕಡೆ ಸಂಭ್ರಮಕ್ಕೆ ಕಾರಣವಾಯಿತು.
ಫಲಿಸಿದ ಉದಯವಾಣಿಯ ವರದಿಬಜಪೆ, ಮಳವೂರು ಗ್ರಾಮ ಪಂಚಾ ಯತ್ಗಳನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್ ಅರ್ಹತೆಯ ಬಗ್ಗೆ 2017ರಲ್ಲಿ ಉದಯವಾಣಿ ದಿನಪತ್ರಿಕೆಯು ಈ ಬಗ್ಗೆ ಸವಿವರವಾದ ವರದಿಯನ್ನು ಪ್ರಕಟಿಸಿತ್ತು. ಅಭಿವೃದ್ಧಿಗೆ ಪೂರಕ
ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಘೋಷಣೆಯಾಗಿದ್ದು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಬೆಳೆಯುತ್ತಿರುವ ಬಜಪೆ, ಮಳವೂರು ಪಂಚಾಯತ್ ವ್ಯಾಪ್ತಿಯಲ್ಲಿ ಎಂಎಸ್ಇಝಡ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇದ್ದು, ಹೆಚ್ಚಿನ ಅನುದಾನ ಬರುವುದರಿಂದ ಮೂಲಸೌಲಭ್ಯಗಳನ್ನು ಕಲ್ಪಿಸಬಹುದು. ಇದು ಸ್ಥಳೀಯವಾಗಿ ಅಭಿವೃದ್ಧಿಗೆ ಪೂರಕವಾಗಲಿದೆ.
-ಉಮಾನಾಥ ಕೋಟ್ಯಾನ್, ಶಾಸಕರು