Advertisement

ಮೌಲ್ಯಾಂಕನ ಕುರಿತ ನಿರ್ಧಾರ ಎರಡು ದಿನದಲ್ಲಿ ಪ್ರಕಟ: ಎಸ್. ಸುರೇಶ್ ಕುಮಾರ್

12:59 PM Apr 05, 2021 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ಮೌಲ್ಯಾಂಕ ಕುರಿತು ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

Advertisement

ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಟನೆಗಳ ಜತೆ ಸಭೆ ನಡೆಸಿ, ಅವರ ವಾದ ಆಲಿಸಿ, ನಂತರ ಮಾತನಾಡಿದ ಅವರು, ವಿದ್ಯಾಭಾರತಿ ಸೇರಿ ಕೆಲವು ಶಾಲಾ ಸಂಘಟನೆಗಳು ಮೌಲ್ಯಾಂಕನ ಮಾಡಬೇಕು ಎಂದು ಹೇಳಿವೆ. ಹಾಗೆಯೇ ಶಿಕ್ಷಣ ತಜ್ಞರು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಇರುವ ಅವಕಾಶದಂತೆ ಮೌಲ್ಯಾಂಕನ ನಡೆಸಬೇಕು ಎಂದು ಹೇಳಿದ್ದಾರೆ. ಇದೆಲ್ಲವನ್ನು ಕ್ರೋಢೀಕರಿಸಿ, ಇಲಾಖೆಯ ಅಧಿಕಾರಿಗಳ ಚರ್ಚಿಸಿ ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.

ಶಾಲೆ ಸ್ಥಗಿತಗೊಂಡಿದ್ದರೂ ಟ್ಯೂಷನ್ ಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಸಂಬಂಧ ಅಗತ್ಯ ಸೂಚನೆ ನೀಡಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:  ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ಯಡಿಯೂರಪ್ಪ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ

Advertisement

Udayavani is now on Telegram. Click here to join our channel and stay updated with the latest news.

Next