Advertisement
ಸ್ಕೂಟರ್ ಚಲಾಯಿಸುತ್ತಿದ್ದ ದಿನೇಶ್ (28) ಮೃತ ವ್ಯಕ್ತಿ. ಅವರು ಪಡ್ಯ ಕದಿಕೆ ನಿವಾಸಿ ಕೃಷ್ಣನ್-ರತಿ ನಾಯಕ್ ದಂಪತಿಯ ಏಕೈಕ ಪುತ್ರರಾಗಿದ್ದರು. ಹಿಂಬದಿ ಸವಾರರಾಗಿದ್ದ ವೇಲು ಹಾಗೂ ಮುರುಗೇಶ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇವರೆಲ್ಲರೂ ಕಾರ್ಮಿಕ ರಾಗಿದ್ದು, ತಮಿಳುನಾಡು ಮೂಲದವರಾಗಿದ್ದಾರೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದಿಂದ ಉಡುಪಿಯತ್ತ ತೆರಳುತ್ತಿದ್ದ ದ್ವಿಚಕ್ರ ವಾಹನ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ತೆರ ಳುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ದಿನೇಶ ಸ್ಥಳದಲ್ಲೇ ಮೃತಪಟ್ಟಿದ್ದರು. ಸಹಸವಾರರು ರಸ್ತೆಗೆ ಉರುಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸ್ಕೂಟರ್ನಲ್ಲಿ ಮೂವರು ತೆರಳುತ್ತಿದ್ದು, ಯಾರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.