Advertisement

ಛೇ…ಕಲ್ಯಾಣಮಂಟಪದಲ್ಲೇ ವರ ಸಾವು! ತುಮಕೂರಿನಲ್ಲಿ ದಾರುಣ ಘಟನೆ 

11:36 AM Feb 05, 2017 | Team Udayavani |

ತುಮಕೂರು: ಇನ್ನೇನು ಹೊಸ ಬಾಳಿಕೆ ಕಾಲಿರಿಸುವ ಕ್ಷಣ..ಅದೇ ಹೊತ್ತಿಗೆ ಹೊಂಚು ಹಾಕಿ ಕುಳಿತಿದ್ದ ಜವರಾಯ …ತಾಳಿ ಕಟ್ಟಲು ಕೆಲವೇ ಹೊತ್ತಿರುವ ವೇಳೆ ವರ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಗವಿರಂಗ ಕಲ್ಯಾಣ ಮಂಟಪದಲ್ಲಿ ದುರಂತ ನಡೆದಿದ್ದು, ವಸಂತ್‌ ಕುಮಾರ್‌ ಎಂಬ ವರ ಹೃದಯಾಘಾತದಿಂದ ಕೊನೆಯುಸಿರೆಳೆದವರು ಎಂದು ತಿಳಿದು ಬಂದಿದೆ.

ವಸಂತ್‌ಕುಮಾರ್‌ ಎಂ.ಟೆಕ್‌ ಪದವೀಧರರಾಗಿ ಉನ್ನತ ಹುದ್ದೆಯಲ್ಲಿದ್ದು, ಎಂ.ಟೆಕ್‌ ಪದವೀಧರೆಯೊಂದಿಗೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ವರಪೂಜೆ ಸಂಪ್ರದಾಯಗಳು ನಡೆದಿದ್ದವು. 

ವರನ ಸಾವಿನಿಂದ ಸಂಭ್ರಮದಲ್ಲಿದ್ದ ಸಭಾಂಗಣದಲ್ಲಿ  ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು, ಸಮಾರಂಭಕ್ಕೆ ಆಗಮಿಸಿದ ಎಲ್ಲರೂ ಬರ ಸಿಡಿಲು ಹೊಡೆದಂತವರಾಗಿದ್ದಾರೆ. ಹಾಲ್‌ನ ತುಂಬಾ  ಸ್ಮಶಾನ ಮೌನ ಕಾಣಿಸಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next