Advertisement

ಕೋಟಿತೀರ್ಥ ಪುಷ್ಕರಿಣಿಯ ಮೀನುಗಳ ಸಾವು, ಗ್ರಾಮಸ್ಥರ ಆಕ್ರೋಶ

12:06 PM Oct 07, 2022 | Team Udayavani |

ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೋಟಿತೀರ್ಥ ಪುಷ್ಕರಿಣಿಯಲ್ಲಿನ ಮೀನುಗಳು ದಿಢೀರಾಗಿ ಸಾವನ್ನಪ್ಪಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಕಲುಷಿತ ನೀರಿನಿಂದಾಗಿ ಮೀನುಗಳು ಸಾವನ್ನಪ್ಪಿರುವುದು ಕಂಡು ಬಂದಿದೆ.

Advertisement

ಕಳೆದ 10 ದಿನಗಳಿಂದ ಪ್ರತಿದಿನ ಕನಿಷ್ಠ 10 ಮೀನುಗಳು ಸಾಯುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನನ್ವಯ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೃಷ್ಣ ಗೊಲ್ಲ, ಪಿಡಿಒ ದಿನೇಶ ನಾಯ್ಕ ಹಾಗೂ ಸದಸ್ಯರು, ಎಂಜಿನಿಯರ್‌ ಸು ಧೀರ್‌ ಕುಮಾರ್‌ ಶೆಟ್ಟಿ ಮಾರ್ಕೋಡು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ಇತ್ತು ನೀರಿನ ಮಾದರಿಯನ್ನು ಪರೀಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗ್ರಾಮಸ್ಥರಿಂದ ಮನವಿ

ದಿನೇದಿನೆ ಕೆರೆಯ ಮೀನು ಸಾಯುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಪಂಚಾಯತ್‌ಗೆ ಮನವಿ ಸಲ್ಲಿಸಿ ತೋಡಿನ ಮೂಲಕ ಕೆರೆ ಸೇರುತ್ತಿರುವ ತ್ಯಾಜ್ಯ ದಿಂದಾಗಿ ನೀರು ದಪ್ಪವಾಗಿ ಮೀನುಗಳ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿರುವುದು ಮೀನುಗಳ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next